ಗೋಮುಖ್ ಪ್ರದೇಶದಿಂದ ಗಂಗಾಸಾಗರದವರೆಗೆ ಹಸಿರೀಕರಣಕ್ಕೆ ಸರ್ಕಾರ ಮುಂದಾಗಿದೆ. ಒಳಚರಂಡಿಗೆ ರಾಸಾಯನಿಕ ಮತ್ತು ಕೈಗಾರಿಕಾ ತ್ಯಾಜ್ಯ ಬಿಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ರೆಡ್ ಕ್ರಾಸ್ ಮಾದರಿಯಲ್ಲಿಯೇ ‘ಗಂಗಾ ವಾಹಿನಿ’ ಎಂಬ ರಾಷ್ಟ್ರೀಯ ಸ್ವಯಂಸೇವಕರ ಪಡೆಯನ್ನು ಸ್ಥಾಪಿಸಲಾಗುವುದು. ಈ ಪಡೆಯಲ್ಲಿ ಯುವಕರು, ವಿದ್ಯಾರ್ಥಿಗಳು, ಮಾಜಿ ಯೋಧರು ಮತ್ತಿತರರು ಗಂಗಾನದಿ ಶುದ್ಧೀಕರಣದ ಸಂದೇಶಗಳನ್ನು ದೇಶದಾದ್ಯಂತ ಹರಡಲಿದ್ದಾರೆ ಎಂದು ಅವರ ವಿವರಿಸಿದರು.