<p><strong>ಬೆಂಗಳೂರು:</strong> `ಪತ್ರಗಳು ಚರಿತ್ರೆಯ ದಾಖಲೆಗಳು. ಸಾಹಿತ್ಯಿಕವಾಗಿ ಇತರೆ ಪ್ರಕಾರಗಳಿಗಿಂತ ಭಿನ್ನವಾಗಿದ್ದರೂ ಓದುಗರಲ್ಲಿ ಒಳನೋಟಗಳನ್ನು ರೂಪಿಸುತ್ತದೆ' ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು.<br /> <br /> ಯು.ಆರ್.ಅನಂತಮೂರ್ತಿ ಗೌರವ ಮಾಲಿಕೆ ಕೃತಿಗಳ ಭಾಗವಾಗಿ ಅಭಿನವ ಪ್ರಕಾಶನವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯನಾಥ ಶೆಣೈ ಅವರ `ಪತ್ರ ವಾತ್ಸಲ್ಯ', ಬಸವರಾಜ ಕಲ್ಗುಡಿ ಅವರ `ಮೈಯೇ ಸೂರು ಮನವೇ ಮಾತು', ಕೆ.ಪಿ.ಭಟ್ ಅವರ `ಭಾಷೆ ಮತ್ತು ಸಾಮಾಜಿಕ ಸಂದರ್ಭ' ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.<br /> <br /> `ಗಾಂಧಿ ಹಾಗೂ ಟ್ಯಾಗೋರ್ ಅವರ ಪತ್ರ ಸಂವಾದವೂ ವ್ಯಕ್ತಿತ್ವದ ಹಲವು ಮಜಲುಗಳನ್ನು ಅರಿಯಲು ನೆರವಾಗುತ್ತದೆ. ಅಂತೆಯೇ ಈ `ಪತ್ರ ವಾತ್ಸಲ್ಯ' ಪುಸ್ತಕವೂ ಕೂಡ ಹಲವು ಹೊಳಹುಗಳನ್ನು ನೀಡುತ್ತಲೇ ಬದುಕಿನ ದಿಗ್ದರ್ಶನ ಮಾಡಿಸುತ್ತದೆ' ಎಂದು ಶ್ಲಾಘಿಸಿದರು.<br /> <br /> `ಇತರೆ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಿದ್ದರೂ ಕೂಡ ಬಸವರಾಜ ಕಲ್ಗುಡಿ ಅಂತಹವರು ವಿ.ವಿಯಲ್ಲಿ ಕಾರ್ಯನಿರ್ವಹಿಸಿಯೂ ಹೊಸ ಮಾಹಿತಿಯನ್ನು ಒದಗಿಸುವ ಕೃತಿಯನ್ನು ರಚಿಸಿರುವುದು ಖುಷಿಯ ವಿಚಾರ' ಎಂದರು.<br /> <br /> `ಅಂದಿನ ಕಾಲಕ್ಕೆ ಸಾಮಾಜಿಕ ವಿಚಾರಗಳ ಬಗ್ಗೆ ಬೌದ್ಧಿಕ ಚರ್ಚೆ ಏರ್ಪಡಿಸುವಲ್ಲಿ ಅನಂತಮೂರ್ತಿ ಅವರು ನಿಸ್ಸೀಮರು. ಅದನ್ನು ಇಂದಿಗೂ ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ನನಗೆ ಪಾಠ ಮಾಡಿ ಗುರುವಾಗಿದ್ದರು. ಪಠ್ಯದಲ್ಲಿ ಬೆಸೆದುಕೊಂಡ ವಿಚಾರಗಳನ್ನು ಬಹಳ ಸೂಕ್ಷ್ಮವಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು' ಎಂದು ನೆನಪಿಸಿಕೊಂಡರು.<br /> <br /> ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ನನಗೆ ಅತ್ಯಂತ ಪ್ರಿಯವಾದದ್ದು ಮೇಷ್ಟ್ರ ಕೆಲಸ. ನನ್ನ ಎಲ್ಲ ಚಿಂತನೆಗಳು ಕೂಡ ಬೋಧನೆಯಿಂದಲೇ ಹುಟ್ಟಿಕೊಂಡವು. ನನಗೊಬ್ಬ ಮೇಷ್ಟ್ರಿದ್ದರು, ಅವರಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಯು ಸಿಗಲಿಲ್ಲ, ಕೊನೆವರೆಗೂ ಅವರು ಸಾಧಾರಣ ಬೋಧಕ ಹುದ್ದೆಯಲ್ಲಿಯೇ ಇದ್ದರು. ಆದರೆ `ಮೇಷ್ಟ್ರಾಗಿ ನಾನು ಅನುಭವಿಸಿದ ಸಂತೋಷಕ್ಕೆ ನಾನೇ ಹಣ ನೀಡಬೇಕು' ಎಂದು ಹೇಳುತ್ತಿದ್ದರು. ಒಬ್ಬ ಉತ್ತಮ ಮೇಷ್ಟ್ರು ಮಾತ್ರ ಹೀಗೆ ಆತ್ಮತೃಪ್ತಿಯನ್ನು ಹೊಂದಲು ಸಾಧ್ಯ' ಎಂದು ತಿಳಿಸಿದರು.<br /> <br /> ಮಾಲಿಕೆ ಸಂಪಾದಕ ಎನ್.ಎ.ಎಂ.ಇಸ್ಮಾಯಿಲ್, `ಪ್ರಜಾವಾಣಿ'ಯ ಮುಖ್ಯ ಉಪಸಂಪಾದಕ ರಘುನಾಥ ಚ.ಹ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಪತ್ರಗಳು ಚರಿತ್ರೆಯ ದಾಖಲೆಗಳು. ಸಾಹಿತ್ಯಿಕವಾಗಿ ಇತರೆ ಪ್ರಕಾರಗಳಿಗಿಂತ ಭಿನ್ನವಾಗಿದ್ದರೂ ಓದುಗರಲ್ಲಿ ಒಳನೋಟಗಳನ್ನು ರೂಪಿಸುತ್ತದೆ' ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು.<br /> <br /> ಯು.ಆರ್.ಅನಂತಮೂರ್ತಿ ಗೌರವ ಮಾಲಿಕೆ ಕೃತಿಗಳ ಭಾಗವಾಗಿ ಅಭಿನವ ಪ್ರಕಾಶನವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯನಾಥ ಶೆಣೈ ಅವರ `ಪತ್ರ ವಾತ್ಸಲ್ಯ', ಬಸವರಾಜ ಕಲ್ಗುಡಿ ಅವರ `ಮೈಯೇ ಸೂರು ಮನವೇ ಮಾತು', ಕೆ.ಪಿ.ಭಟ್ ಅವರ `ಭಾಷೆ ಮತ್ತು ಸಾಮಾಜಿಕ ಸಂದರ್ಭ' ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.<br /> <br /> `ಗಾಂಧಿ ಹಾಗೂ ಟ್ಯಾಗೋರ್ ಅವರ ಪತ್ರ ಸಂವಾದವೂ ವ್ಯಕ್ತಿತ್ವದ ಹಲವು ಮಜಲುಗಳನ್ನು ಅರಿಯಲು ನೆರವಾಗುತ್ತದೆ. ಅಂತೆಯೇ ಈ `ಪತ್ರ ವಾತ್ಸಲ್ಯ' ಪುಸ್ತಕವೂ ಕೂಡ ಹಲವು ಹೊಳಹುಗಳನ್ನು ನೀಡುತ್ತಲೇ ಬದುಕಿನ ದಿಗ್ದರ್ಶನ ಮಾಡಿಸುತ್ತದೆ' ಎಂದು ಶ್ಲಾಘಿಸಿದರು.<br /> <br /> `ಇತರೆ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಿದ್ದರೂ ಕೂಡ ಬಸವರಾಜ ಕಲ್ಗುಡಿ ಅಂತಹವರು ವಿ.ವಿಯಲ್ಲಿ ಕಾರ್ಯನಿರ್ವಹಿಸಿಯೂ ಹೊಸ ಮಾಹಿತಿಯನ್ನು ಒದಗಿಸುವ ಕೃತಿಯನ್ನು ರಚಿಸಿರುವುದು ಖುಷಿಯ ವಿಚಾರ' ಎಂದರು.<br /> <br /> `ಅಂದಿನ ಕಾಲಕ್ಕೆ ಸಾಮಾಜಿಕ ವಿಚಾರಗಳ ಬಗ್ಗೆ ಬೌದ್ಧಿಕ ಚರ್ಚೆ ಏರ್ಪಡಿಸುವಲ್ಲಿ ಅನಂತಮೂರ್ತಿ ಅವರು ನಿಸ್ಸೀಮರು. ಅದನ್ನು ಇಂದಿಗೂ ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ನನಗೆ ಪಾಠ ಮಾಡಿ ಗುರುವಾಗಿದ್ದರು. ಪಠ್ಯದಲ್ಲಿ ಬೆಸೆದುಕೊಂಡ ವಿಚಾರಗಳನ್ನು ಬಹಳ ಸೂಕ್ಷ್ಮವಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು' ಎಂದು ನೆನಪಿಸಿಕೊಂಡರು.<br /> <br /> ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ನನಗೆ ಅತ್ಯಂತ ಪ್ರಿಯವಾದದ್ದು ಮೇಷ್ಟ್ರ ಕೆಲಸ. ನನ್ನ ಎಲ್ಲ ಚಿಂತನೆಗಳು ಕೂಡ ಬೋಧನೆಯಿಂದಲೇ ಹುಟ್ಟಿಕೊಂಡವು. ನನಗೊಬ್ಬ ಮೇಷ್ಟ್ರಿದ್ದರು, ಅವರಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಯು ಸಿಗಲಿಲ್ಲ, ಕೊನೆವರೆಗೂ ಅವರು ಸಾಧಾರಣ ಬೋಧಕ ಹುದ್ದೆಯಲ್ಲಿಯೇ ಇದ್ದರು. ಆದರೆ `ಮೇಷ್ಟ್ರಾಗಿ ನಾನು ಅನುಭವಿಸಿದ ಸಂತೋಷಕ್ಕೆ ನಾನೇ ಹಣ ನೀಡಬೇಕು' ಎಂದು ಹೇಳುತ್ತಿದ್ದರು. ಒಬ್ಬ ಉತ್ತಮ ಮೇಷ್ಟ್ರು ಮಾತ್ರ ಹೀಗೆ ಆತ್ಮತೃಪ್ತಿಯನ್ನು ಹೊಂದಲು ಸಾಧ್ಯ' ಎಂದು ತಿಳಿಸಿದರು.<br /> <br /> ಮಾಲಿಕೆ ಸಂಪಾದಕ ಎನ್.ಎ.ಎಂ.ಇಸ್ಮಾಯಿಲ್, `ಪ್ರಜಾವಾಣಿ'ಯ ಮುಖ್ಯ ಉಪಸಂಪಾದಕ ರಘುನಾಥ ಚ.ಹ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>