ಸ್ವಾತಂತ್ರ್ಯಾನಂತರ ದೇಶ ಕೋಮು ದಳ್ಳುರಿಗೆ ತುತ್ತಾಗಿದ್ದಾಗ ಗಾಂಧೀಜಿ ಪಾದಯಾತ್ರೆ ಮಾಡಿದರು; ಉಪವಾಸ ಸತ್ಯಾಗ್ರಹ ಹೂಡಿದರು. ಅದನ್ನು ಸಹಿಸದ ಗೋಡ್ಸೆ, ಗಾಂಧೀಜಿ ಅವರಿಗೆ ಗುಂಡಿಕ್ಕಿದ್ದು ಈಗ ಇತಿಹಾಸ.
ಅಂಥ ಗೋಡ್ಸೆಗೆ ಹಿಂದುತ್ವವಾದಿಗಳು ಗುಡಿ ಕಟ್ಟಿ ಆರಾಧಿಸಲು ಹೊರಟಿದ್ದಾರೆ. ಅಮೆರಿಕದ ಅಧ್ಯಕ್ಷರ ಸಮಕ್ಷಮದಲ್ಲಿ ಅತ್ಯಂತ ವೈಭವದಿಂದ ಮೊನ್ನೆ ತಾನೆ ಈ ವರ್ಷದ ಗಣರಾಜ್ಯೋತ್ಸವ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗೋಡ್ಸೆಗೆ ಗುಡಿ ಕಟ್ಟುತ್ತಿರುವುದರ ಬಗ್ಗೆ ಇದುವರೆಗೆ ಚಕಾರ ಎತ್ತಿಲ್ಲ. ಇಂಥವರು ಇದೇ ಜನವರಿ 30 ರಂದು ಗಾಂಧಿ ಅವರನ್ನು ಸ್ಮರಿಸಿ ಸರ್ವೋದಯ ದಿನವನ್ನು ಆಚರಿಸುತ್ತಾರೆ.
ಗಾಂಧೀಜಿಯವರು ಯಾವ ಮೌಲ್ಯಕ್ಕಾಗಿ ಪ್ರಾಣತೆತ್ತರೋ ಅಂಥ ಅಹಿಂಸಾ ಮೌಲ್ಯ ಕುರಿತ ಅನುಸಂಧಾನ, ನೈತಿಕ ಭಾವ ಕನಿಷ್ಠ ಆ ದಿನವಾದರೂ ಉದಯಿಸಲಿ.