<p><strong>ಬೆಂಗಳೂರು:</strong> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿಯ ಬಜೆಟ್ನಲ್ಲಿ ಒಟ್ಟು ರೂ 289 ಕೋಟಿಯ ಪಾಲು ಪಡೆದುಕೊಂಡಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುವ ಯಾವುದೇ ಹೊಸ ಯೋಜನೆಗಳನ್ನು ಬಜೆಟ್ ಒಳಗೊಂಡಿಲ್ಲ. ಆದರೆ, ರಾಜ್ಯದ ಎಲ್ಲ ಪಾರಂಪರಿಕ ತಾಣಗಳ ಅಭಿವೃದ್ಧಿ, ಸಂರಕ್ಷಣೆ ಮತ್ತು ನಿರ್ವಹಣೆಗೆ `ಕರ್ನಾಟಕ ವಿಶ್ವ ಪರಂಪರಾ ಆಯೋಗ' ರಚಿಸುವುದಾಗಿ ಸರ್ಕಾರ ಘೋಷಿಸಿದೆ.<br /> <br /> ಈ ಆಯೋಗಕ್ಕೆ ಬಜೆಟ್ನಲ್ಲಿ ರೂ 2 ಕೋಟಿ ಮೀಸಲಿಡಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿರುವ ವಸ್ತು ಸಂಗ್ರಹಾಲಯವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸಲು, ಗಾಂಧಿ ಅಧ್ಯಯನ ಕೇಂದ್ರ ನಿರ್ಮಾಣ ಮತ್ತು ಗಾಂಧಿ ಸಾಹಿತ್ಯ ಪ್ರಚಾರಕ್ಕೆ ಮತ್ತು ಗಾಂಧಿ ಭವನದ ನಿರ್ವಹಣಾ ವೆಚ್ಚಕ್ಕೆ ಒಟ್ಟು ರೂ 4 ಕೋಟಿ ನೀಡಲಾಗಿದೆ.<br /> <br /> ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಅಂಗವಾಗಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳಿಗೆ ರೂ 5 ಕೋಟಿ, ಮೈಸೂರಿನಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ರೂ 2 ಕೋಟಿ ನಿಗದಿ ಮಾಡಲಾಗಿದೆ.<br /> <br /> ರಾಮನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ದಾವಣಗೆರೆ ಮತ್ತು ಯಾದಗಿರಿ ಜಿಲ್ಲೆಗಳ ಗೆಜೆಟಿಯರ್ಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲು ರೂ 1 ಕೋಟಿ ಮೀಸಲಿಡಲಾಗಿದೆ. ಕವಿಗುರು ರವೀಂದ್ರನಾಥ ಟಾಗೋರ್ ಅವರಿಗೆ ನೊಬೆಲ್ ಪುರಸ್ಕಾರ ದೊರೆತು ನೂರು ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ, ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣಕ್ಕೆ ರೂ 15 ಕೋಟಿ ಅನುದಾನ ಘೋಷಿಸಲಾಗಿದೆ.<br /> <br /> ಉತ್ತರ ಕರ್ನಾಟಕದ ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿ ಮತ್ತು ಪರಂಪರೆ ಪ್ರತಿಬಿಂಬಿಸಲು ಧಾರವಾಡ ಜಿಲ್ಲೆಯಲ್ಲಿ `ಕರ್ನಾಟಕ ಜಾನಪದ ಜಗತ್ತು' ನಿರ್ಮಾಣಕ್ಕೆ ರೂ 3 ಕೋಟಿ ಅನುದಾನ. ಹೂವಿನ ಹಡಗಲಿಯ ರಂಗಭಾರತಿ ಸಂಸ್ಥೆ ನಿರ್ಮಿಸುತ್ತಿರುವ ರಂಗಸಮುಚ್ಚಯಕ್ಕೆ ರೂ 1 ಕೋಟಿ. ಹೊರ ರಾಜ್ಯಗಳು ಹಾಗೂ ಹೊರ ದೇಶಗಳಲ್ಲಿರುವ ಕನ್ನಡಿಗರು ಆಯೋಜಿಸುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರೂ 10 ಕೋಟಿ ನೀಡುವುದಾಗಿ ಸರ್ಕಾರ ಹೇಳಿದೆ.<br /> <br /> ಹಿರೇಕೆರೂರು ತಾಲ್ಲೂಕಿನಲ್ಲಿ ಸರ್ವಜ್ಞ ಪ್ರಾಧಿಕಾರಕ್ಕೆ ರೂ 2 ಕೋಟಿ. ಕನಕದಾಸರ ಜನ್ಮಸ್ಥಳವಾದ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಯಾತ್ರಾರ್ಥಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲು ರೂ 1 ಕೋಟಿ. ಧಾರವಾಡದ ಕಲಾಭವನ ಮತ್ತು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದ ನವೀಕರಣಕ್ಕೆ ರೂ 5 ಕೋಟಿ. ಧಾರವಾಡದಲ್ಲಿ `ಗಾಂಧಿ ಗ್ರಾಮ' ನಿರ್ಮಾಣಕ್ಕೆ ಪ್ರಾರಂಭಿಕ ಅನುದಾನವಾಗಿ ರೂ 5 ಕೋಟಿ ನೀಡುವ ಭರವಸೆ ಈ ಬಾರಿಯ ಬಜೆಟ್ನಲ್ಲಿದೆ.<br /> <br /> ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಶ್ರಯದಲ್ಲಿ `ದರ್ಶನ ಭವನ' ನಿರ್ಮಾಣಕ್ಕೆ ರೂ 5 ಕೋಟಿ, ಡಾ. ಮಲ್ಲಿಕಾರ್ಜುನ ಮನ್ಸೂರ ಪ್ರತಿಷ್ಠಾನ ಭವನ ನಿರ್ಮಾಣಕ್ಕೆ ರೂ 5 ಕೋಟಿ, ಸೇನೆಯ ಮಹಾ ದಂಡನಾಯಕರಾಗಿದ್ದ ಜಿ.ಜಿ. ಬೇವೂರ ಸ್ಮರಣಾರ್ಥ ಬಾಗಲಕೋಟೆಯಲ್ಲಿ ಭವನ ಹಾಗೂ ಮಹಾದ್ವಾರ ನಿರ್ಮಾಣಕ್ಕೆ ರೂ 2 ಕೋಟಿ, ಮಂಗಳೂರಿನಲ್ಲಿ ಕಲಾಂಗಣಿ ಪಾರಂಪರಿಕ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ರೂ 2 ಕೋಟಿ, ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಭವನ ನಿರ್ಮಾಣಕ್ಕೆ ರೂ 2 ಕೋಟಿ ನೀಡಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ.</p>.<p><strong>ಪ್ರಮುಖ ಸಂಸ್ಥೆಗಳಿಗೆ ನೆರವು</strong><br /> ಕರ್ನಾಟಕ ವಿಶ್ವ ಪರಂಪರಾ ಆಯೋಗ ರಚನೆ<br /> ಕನಕದಾಸರ ಬಾಡ, ಹಡಗಲಿಯ ರಂಗಭಾರತಿಗೆ ತಲಾ ರೂ 1 ಕೋಟಿ<br /> ಧಾರವಾಡದ ಕಲಾಭವನ, ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಂಗಣಕ್ಕೆ ಹಣ<br /> ಗಾಂಧಿ, ವಿವೇಕಾನಂದ, ಮನ್ಸೂರ, ರಾಯಣ್ಣ, ಬೆವೂರ, ಟ್ಯಾಗೋರ್, ಸರ್ವಜ್ಞ ಸ್ಮರಣೆಗೆ ನೆರವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿಯ ಬಜೆಟ್ನಲ್ಲಿ ಒಟ್ಟು ರೂ 289 ಕೋಟಿಯ ಪಾಲು ಪಡೆದುಕೊಂಡಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುವ ಯಾವುದೇ ಹೊಸ ಯೋಜನೆಗಳನ್ನು ಬಜೆಟ್ ಒಳಗೊಂಡಿಲ್ಲ. ಆದರೆ, ರಾಜ್ಯದ ಎಲ್ಲ ಪಾರಂಪರಿಕ ತಾಣಗಳ ಅಭಿವೃದ್ಧಿ, ಸಂರಕ್ಷಣೆ ಮತ್ತು ನಿರ್ವಹಣೆಗೆ `ಕರ್ನಾಟಕ ವಿಶ್ವ ಪರಂಪರಾ ಆಯೋಗ' ರಚಿಸುವುದಾಗಿ ಸರ್ಕಾರ ಘೋಷಿಸಿದೆ.<br /> <br /> ಈ ಆಯೋಗಕ್ಕೆ ಬಜೆಟ್ನಲ್ಲಿ ರೂ 2 ಕೋಟಿ ಮೀಸಲಿಡಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿರುವ ವಸ್ತು ಸಂಗ್ರಹಾಲಯವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸಲು, ಗಾಂಧಿ ಅಧ್ಯಯನ ಕೇಂದ್ರ ನಿರ್ಮಾಣ ಮತ್ತು ಗಾಂಧಿ ಸಾಹಿತ್ಯ ಪ್ರಚಾರಕ್ಕೆ ಮತ್ತು ಗಾಂಧಿ ಭವನದ ನಿರ್ವಹಣಾ ವೆಚ್ಚಕ್ಕೆ ಒಟ್ಟು ರೂ 4 ಕೋಟಿ ನೀಡಲಾಗಿದೆ.<br /> <br /> ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಅಂಗವಾಗಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳಿಗೆ ರೂ 5 ಕೋಟಿ, ಮೈಸೂರಿನಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ರೂ 2 ಕೋಟಿ ನಿಗದಿ ಮಾಡಲಾಗಿದೆ.<br /> <br /> ರಾಮನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ದಾವಣಗೆರೆ ಮತ್ತು ಯಾದಗಿರಿ ಜಿಲ್ಲೆಗಳ ಗೆಜೆಟಿಯರ್ಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲು ರೂ 1 ಕೋಟಿ ಮೀಸಲಿಡಲಾಗಿದೆ. ಕವಿಗುರು ರವೀಂದ್ರನಾಥ ಟಾಗೋರ್ ಅವರಿಗೆ ನೊಬೆಲ್ ಪುರಸ್ಕಾರ ದೊರೆತು ನೂರು ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ, ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣಕ್ಕೆ ರೂ 15 ಕೋಟಿ ಅನುದಾನ ಘೋಷಿಸಲಾಗಿದೆ.<br /> <br /> ಉತ್ತರ ಕರ್ನಾಟಕದ ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿ ಮತ್ತು ಪರಂಪರೆ ಪ್ರತಿಬಿಂಬಿಸಲು ಧಾರವಾಡ ಜಿಲ್ಲೆಯಲ್ಲಿ `ಕರ್ನಾಟಕ ಜಾನಪದ ಜಗತ್ತು' ನಿರ್ಮಾಣಕ್ಕೆ ರೂ 3 ಕೋಟಿ ಅನುದಾನ. ಹೂವಿನ ಹಡಗಲಿಯ ರಂಗಭಾರತಿ ಸಂಸ್ಥೆ ನಿರ್ಮಿಸುತ್ತಿರುವ ರಂಗಸಮುಚ್ಚಯಕ್ಕೆ ರೂ 1 ಕೋಟಿ. ಹೊರ ರಾಜ್ಯಗಳು ಹಾಗೂ ಹೊರ ದೇಶಗಳಲ್ಲಿರುವ ಕನ್ನಡಿಗರು ಆಯೋಜಿಸುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರೂ 10 ಕೋಟಿ ನೀಡುವುದಾಗಿ ಸರ್ಕಾರ ಹೇಳಿದೆ.<br /> <br /> ಹಿರೇಕೆರೂರು ತಾಲ್ಲೂಕಿನಲ್ಲಿ ಸರ್ವಜ್ಞ ಪ್ರಾಧಿಕಾರಕ್ಕೆ ರೂ 2 ಕೋಟಿ. ಕನಕದಾಸರ ಜನ್ಮಸ್ಥಳವಾದ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಯಾತ್ರಾರ್ಥಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲು ರೂ 1 ಕೋಟಿ. ಧಾರವಾಡದ ಕಲಾಭವನ ಮತ್ತು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದ ನವೀಕರಣಕ್ಕೆ ರೂ 5 ಕೋಟಿ. ಧಾರವಾಡದಲ್ಲಿ `ಗಾಂಧಿ ಗ್ರಾಮ' ನಿರ್ಮಾಣಕ್ಕೆ ಪ್ರಾರಂಭಿಕ ಅನುದಾನವಾಗಿ ರೂ 5 ಕೋಟಿ ನೀಡುವ ಭರವಸೆ ಈ ಬಾರಿಯ ಬಜೆಟ್ನಲ್ಲಿದೆ.<br /> <br /> ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಶ್ರಯದಲ್ಲಿ `ದರ್ಶನ ಭವನ' ನಿರ್ಮಾಣಕ್ಕೆ ರೂ 5 ಕೋಟಿ, ಡಾ. ಮಲ್ಲಿಕಾರ್ಜುನ ಮನ್ಸೂರ ಪ್ರತಿಷ್ಠಾನ ಭವನ ನಿರ್ಮಾಣಕ್ಕೆ ರೂ 5 ಕೋಟಿ, ಸೇನೆಯ ಮಹಾ ದಂಡನಾಯಕರಾಗಿದ್ದ ಜಿ.ಜಿ. ಬೇವೂರ ಸ್ಮರಣಾರ್ಥ ಬಾಗಲಕೋಟೆಯಲ್ಲಿ ಭವನ ಹಾಗೂ ಮಹಾದ್ವಾರ ನಿರ್ಮಾಣಕ್ಕೆ ರೂ 2 ಕೋಟಿ, ಮಂಗಳೂರಿನಲ್ಲಿ ಕಲಾಂಗಣಿ ಪಾರಂಪರಿಕ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ರೂ 2 ಕೋಟಿ, ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಭವನ ನಿರ್ಮಾಣಕ್ಕೆ ರೂ 2 ಕೋಟಿ ನೀಡಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ.</p>.<p><strong>ಪ್ರಮುಖ ಸಂಸ್ಥೆಗಳಿಗೆ ನೆರವು</strong><br /> ಕರ್ನಾಟಕ ವಿಶ್ವ ಪರಂಪರಾ ಆಯೋಗ ರಚನೆ<br /> ಕನಕದಾಸರ ಬಾಡ, ಹಡಗಲಿಯ ರಂಗಭಾರತಿಗೆ ತಲಾ ರೂ 1 ಕೋಟಿ<br /> ಧಾರವಾಡದ ಕಲಾಭವನ, ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಂಗಣಕ್ಕೆ ಹಣ<br /> ಗಾಂಧಿ, ವಿವೇಕಾನಂದ, ಮನ್ಸೂರ, ರಾಯಣ್ಣ, ಬೆವೂರ, ಟ್ಯಾಗೋರ್, ಸರ್ವಜ್ಞ ಸ್ಮರಣೆಗೆ ನೆರವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>