ಬೆಂಗಳೂರು: ‘ನಮ್ಮ ದಾಂಪತ್ಯ ಹಾಳಾಗಲು ಬಿಎಂಟಿಎಫ್ ಎಸ್ಪಿ ದೇವರಾಜ್ ಅವರು ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನಟ ದುನಿಯಾ ವಿಜಯ್ ಅವರು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಅವರಿಗೆ ಗುರುವಾರ ಮನವಿ ಮಾಡಿದ್ದಾರೆ.
‘ವಿಜಯ್ ಅವರು ದೇವರಾಜ್ ವಿರುದ್ಧ ಮೌಖಿಕವಾಗಿ ಆರೋಪ ಮಾಡುತ್ತಿದ್ದಾರೆ. ಆದರೆ, ಅವರು ಪತ್ನಿಯಿಂದ ದೂರವಾಗಲು ದೇವರಾಜ್ ಹೇಗೆ ಕಾರಣ ಎಂಬುದನ್ನು ತಿಳಿಸಿಲ್ಲ.
ಈ ಬಗ್ಗೆ ಸ್ಥಳೀಯ ಠಾಣೆಗೆ ಲಿಖಿತ ದೂರು ಕೊಡುವಂತೆ ಅವರಿಗೆ ಸೂಚಿಸಲಾಗಿದೆ’ ಎಂದು ಎಂ.ಎನ್. ರೆಡ್ಡಿ ತಿಳಿಸಿದ್ದಾರೆ.