<p><strong>ಬದಿಯಡ್ಕ (ಕಾಸರಗೋಡು ಜಿಲ್ಲೆ):</strong> `ಕಯ್ಯೊರರ ಜನ್ಮ ಶತಮಾನೋತ್ಸವವನ್ನು ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ನಡೆಸಬೇಕು. ಕಯ್ಯೊರರ ಸ್ವಗೃಹ `ಕವಿತಾ ಕುಟೀರ'ದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ಕಯ್ಯೊರರ ಬದುಕೇ ಆದರ್ಶದ ವಿಶ್ವಕೋಶ' ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದರು.<br /> <br /> ಬದಿಯಡ್ಕದ ಕಯ್ಯೊರ ಕಿಂಞಣ್ಣ ರೈ ಅವರ ಸ್ವಗೃಹ `ಕವಿತಾ ಕುಟೀರ'ದಲ್ಲಿ ಶನಿವಾರ ನಡೆದ ಕಯ್ಯೊರರ 99ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಕಯ್ಯೊರರಿಗೆ ಹಾರಾರ್ಪಣೆ ಮಾಡಿ, ಫಲತಾಂಬೂಲ ಹಾಗೂ ಲಾಡು ತಿನ್ನಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಕರ್ನಾಟಕ ಸರ್ಕಾರವು ಹೊರನಾಡ ಕನ್ನಡಿಗರ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ರೂ 500 ಕೋಟಿ ಮೀಸಲಿಡಬೇಕು. ಕಾಸರಗೋಡು ನಗರಸಭೆಯಲ್ಲಿ ಕಯ್ಯೊರರ ಪ್ರತಿಮೆ ಸ್ಥಾಪಿಸಬೇಕು. ಕಯ್ಯೊರರಿಗೆ ರಾಷ್ಟ್ರಪ್ರಶಸ್ತಿ ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು' ಎಂದರು.<br /> <br /> ಅಧ್ಯಕ್ಷತೆ ವಹಿಸಿದ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, `ಕೇರಳ ಹಾಗೂ ಕರ್ನಾಟಕ ಸರ್ಕಾರಕ್ಕೆ ಕಯ್ಯೊರರ ಸಾಧನೆಗಳು ಗೊತ್ತಿದೆ. ಆದ್ದರಿಂದ ಎರಡೂ ಸರ್ಕಾರಗಳೂ ಕಯ್ಯೊರರ ಸಾಧನೆಗೆ ಗೌರವ ನೀಡಬೇಕು' ಎಂದರು.<br /> <br /> ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮಾತನಾಡಿ, `ತುಳುನಾಡು ಹಾಗೂ ಗಡಿನಾಡಿನ ಕನ್ನಡಿಗರ ಸಿರಿಮುಡಿಯ ಕಿರೀಟದ ಗರಿಯಂತೆ ಇರುವ ಕಯ್ಯೊರರು ನಮಗೆಲ್ಲಾ ಆದರ್ಶ. ಕಯ್ಯೊರರಿಗೆ ದೊರೆಯಬೇಕಾದ ಸ್ಥಾನಮಾನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಪ್ರಯತ್ನಿಸುತ್ತೇನೆ' ಎಂದು ಹೇಳಿದರು.<br /> <br /> ಬದಿಯಡ್ಕ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ, `ಕಯ್ಯೊರರು ನಮ್ಮ ಅಭಿಮಾನದ ಪ್ರತೀಕ. ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಯ್ಯೊರರ ಪ್ರತಿಮೆ ಸ್ಥಾಪಿಸುವುದಕ್ಕೆ ಆಡಳಿತ ಸಮಿತಿ ಸಹಕಾರ ನೀಡಲಿದೆ ಎಂದರು.<br /> <br /> ಕಯ್ಯೊರರ ಪುತ್ರ ಪ್ರಸನ್ನ ರೈ ಅವರು ಕಯ್ಯೊರರು ರಚಿಸಿದ ಆಶಯಗೀತೆ ಹಾಡಿದರು. ಶ್ರಿನಿವಾಸ ಆಳ್ವ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು. ಕಯ್ಯೊರರ ಬರಹಗಳು, ಪತ್ರಿಕಾ ವರದಿಗಳ ಪ್ರದರ್ಶನ ಹಾಗೂ ಕೂಡ್ಲು ಹೃಷಿಕೇಶ ಭಕ್ತವೃಂದದಿಂದ ಕಯ್ಯೊರ ಕಾವ್ಯಗಾಯನ ನಡೆಯಿತು.<br /> <br /> ಕರ್ನಾಟಕ ಸರ್ಕಾರಕ್ಕೆ ಸಚಿವ ಯು.ಟಿ. ಖಾದರ್ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬದಿಯಡ್ಕ (ಕಾಸರಗೋಡು ಜಿಲ್ಲೆ):</strong> `ಕಯ್ಯೊರರ ಜನ್ಮ ಶತಮಾನೋತ್ಸವವನ್ನು ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ನಡೆಸಬೇಕು. ಕಯ್ಯೊರರ ಸ್ವಗೃಹ `ಕವಿತಾ ಕುಟೀರ'ದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ಕಯ್ಯೊರರ ಬದುಕೇ ಆದರ್ಶದ ವಿಶ್ವಕೋಶ' ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದರು.<br /> <br /> ಬದಿಯಡ್ಕದ ಕಯ್ಯೊರ ಕಿಂಞಣ್ಣ ರೈ ಅವರ ಸ್ವಗೃಹ `ಕವಿತಾ ಕುಟೀರ'ದಲ್ಲಿ ಶನಿವಾರ ನಡೆದ ಕಯ್ಯೊರರ 99ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಕಯ್ಯೊರರಿಗೆ ಹಾರಾರ್ಪಣೆ ಮಾಡಿ, ಫಲತಾಂಬೂಲ ಹಾಗೂ ಲಾಡು ತಿನ್ನಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಕರ್ನಾಟಕ ಸರ್ಕಾರವು ಹೊರನಾಡ ಕನ್ನಡಿಗರ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ರೂ 500 ಕೋಟಿ ಮೀಸಲಿಡಬೇಕು. ಕಾಸರಗೋಡು ನಗರಸಭೆಯಲ್ಲಿ ಕಯ್ಯೊರರ ಪ್ರತಿಮೆ ಸ್ಥಾಪಿಸಬೇಕು. ಕಯ್ಯೊರರಿಗೆ ರಾಷ್ಟ್ರಪ್ರಶಸ್ತಿ ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು' ಎಂದರು.<br /> <br /> ಅಧ್ಯಕ್ಷತೆ ವಹಿಸಿದ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, `ಕೇರಳ ಹಾಗೂ ಕರ್ನಾಟಕ ಸರ್ಕಾರಕ್ಕೆ ಕಯ್ಯೊರರ ಸಾಧನೆಗಳು ಗೊತ್ತಿದೆ. ಆದ್ದರಿಂದ ಎರಡೂ ಸರ್ಕಾರಗಳೂ ಕಯ್ಯೊರರ ಸಾಧನೆಗೆ ಗೌರವ ನೀಡಬೇಕು' ಎಂದರು.<br /> <br /> ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮಾತನಾಡಿ, `ತುಳುನಾಡು ಹಾಗೂ ಗಡಿನಾಡಿನ ಕನ್ನಡಿಗರ ಸಿರಿಮುಡಿಯ ಕಿರೀಟದ ಗರಿಯಂತೆ ಇರುವ ಕಯ್ಯೊರರು ನಮಗೆಲ್ಲಾ ಆದರ್ಶ. ಕಯ್ಯೊರರಿಗೆ ದೊರೆಯಬೇಕಾದ ಸ್ಥಾನಮಾನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಪ್ರಯತ್ನಿಸುತ್ತೇನೆ' ಎಂದು ಹೇಳಿದರು.<br /> <br /> ಬದಿಯಡ್ಕ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ, `ಕಯ್ಯೊರರು ನಮ್ಮ ಅಭಿಮಾನದ ಪ್ರತೀಕ. ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಯ್ಯೊರರ ಪ್ರತಿಮೆ ಸ್ಥಾಪಿಸುವುದಕ್ಕೆ ಆಡಳಿತ ಸಮಿತಿ ಸಹಕಾರ ನೀಡಲಿದೆ ಎಂದರು.<br /> <br /> ಕಯ್ಯೊರರ ಪುತ್ರ ಪ್ರಸನ್ನ ರೈ ಅವರು ಕಯ್ಯೊರರು ರಚಿಸಿದ ಆಶಯಗೀತೆ ಹಾಡಿದರು. ಶ್ರಿನಿವಾಸ ಆಳ್ವ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು. ಕಯ್ಯೊರರ ಬರಹಗಳು, ಪತ್ರಿಕಾ ವರದಿಗಳ ಪ್ರದರ್ಶನ ಹಾಗೂ ಕೂಡ್ಲು ಹೃಷಿಕೇಶ ಭಕ್ತವೃಂದದಿಂದ ಕಯ್ಯೊರ ಕಾವ್ಯಗಾಯನ ನಡೆಯಿತು.<br /> <br /> ಕರ್ನಾಟಕ ಸರ್ಕಾರಕ್ಕೆ ಸಚಿವ ಯು.ಟಿ. ಖಾದರ್ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>