ಹಾವೇರಿ: ಜಾನುವಾರುಗಳ ಕಾಲು ಬಾಯಿ ಬೇನೆ ಸಾಂಕ್ರಾಮಿಕ ರೋಗ. ಇದು ತುಂಬಾ ಹಾನಿ ಮಾಡುತ್ತದೆ. ರೋಗ ಹತೋಟಿಗೆ ಲಸಿಕೆ ಹಾಕಿಸಬೇಕು ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಜೀವ ಕೂಲೇರ ಮನವಿ ಮಾಡಿದರು.
ತಾಲ್ಲೂಕಿನ ಕಾಟೇನಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಜಾನುವಾರುಗಳಿಗೆ ಪಲ್ಸ್ ಪೋಲಿಯೊ ಮಾದರಿಯಲ್ಲಿ ತಪ್ಪದೇ ಲಸಿಕೆ ಹಾಕಿಸಬೇಕು. ಈವರೆಗೆ 45 ಗ್ರಾಮಗಳಲ್ಲಿ 39,320 ಜಾನುವಾರುಗಳಿಗೆ ಉಚಿತ ಲಸಿಕೆ ಹಾಕಲಾಗಿದೆ ಎಂದು ಅವರು ವಿವರ ನೀಡಿದರು.
ತಾ.ಪಂ ಗಂಗವ್ವ ಹಿತ್ತಲಮನಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಬಸವರಾಜ ಅರಬಗೊಂಡ, ಪಶು ವೈದ್ಯರಾದ ಡಾ. ಕಟಗಿಹಳ್ಳಿಮಠ, ಡಾ. ಎಚ್.ಬಿ ಸಣ್ಣಕ್ಕಿ, ಡಾ. ಕಿರಣ ಕೊಪ್ಪದ, ಡಾ. ಅಮೃತರಾಜ, ಡಾ. ನಿಂಗಪ್ಪ ಓಲೇಕಾರ, ಡಾ. ಆಶಾ, ಸಿಬ್ಬಂದಿ ಕರಯಪ್ಪನವರ, ಆಡೂರ, ಹೊನ್ನಪ್ಪನವರ, ಕೂಡಲ, ಕೂಸನೂರ, ಬಸಲಿಂಗಪ್ಪ, ಬಾರಿಗಿಡದ, ದೊಡ್ಡಮನಿ, ಇದ್ದರು.