ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬದಂದು (ಗುರುವಾರ) ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಪ್ರವಾಹ ಸಂತ್ರಸ್ತರೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದಾರೆ.
‘ನಾನು 23ರ ದೀಪಾವಳಿ ದಿನ ಶ್ರೀನಗರದಲ್ಲಿರುತ್ತೇನೆ. ಈಚೆಗೆ ಸಂಭವಿಸಿದ ಪ್ರವಾಹದಲ್ಲಿ ಸಂತ್ರಸ್ತರಾದ ಸೋದರ–ಸೋದರಿಯರೊಂದಿಗೆ ಆ ದಿನ ಕಳೆಯುತ್ತೇನೆ’ ಎಂದು ಮೋದಿ ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ.