ನವದೆಹಲಿ (ಐಎಎನ್ಎಸ್): ಬಾಕಿ ಉಳಿದಿರುವ 21 ತಿಂಗಳ ₨52 ಲಕ್ಷ ವೇತನವನ್ನು ಕೊಡಿಸಬೇಕು ಎಂದು ಕೋರಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಕಿಂಗ್ಫಿಷರ್ ಏರ್ಲೈನ್ಸ್ನ ಮಹಿಳಾ ಪೈಲಟ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿಯ ನ್ಯಾಯಾಲಯವೊಂದು ಏರ್ಲೈನ್ಸ್ಗೆ ಸಮನ್ಸ್ ಜಾರಿ ಮಾಡಿದೆ.
ಜೈಲು ಮುಖ್ಯಸ್ಥರ ಹಾಜರಿಗೆ ಸೂಚನೆ
ನವದೆಹಲಿ (ಪಿಟಿಐ): ಭಾರತದ ವಿವಿದೆಡೆ ದಾಳಿಗಳನ್ನು ನಡೆಸಿ ಈಗ ನ್ಯಾಯಾಂಗ ಬಂಧನದಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರರಿಗೆ ತಿಹಾರ್ ಜೈಲಿನಲ್ಲಿ ಮೂಲಭೂತ ಸೌಲಭ್ಯ ನೀಡುತ್ತಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ನ್ಯಾಯಾಲಯ, ಜೈಲಿನ ವರಿಷ್ಠಾಧಿಕಾರಿ ಕೋರ್ಟ್ಗೆ ಖುದ್ದು ಹಾಜರಾಗುವಂತೆ ನಿರ್ದೇಶಿಸಿದೆ.
ಆ್ಯಮ್ವೇ ಇಂಡಿಯಾ ಸಿಇಒ ಬಂಧನ
ಹೈದರಾಬಾದ್ (ಪಿಟಿಐ): ವಂಚನೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಆ್ಯಮ್ವೇ ಇಂಡಿಯಾ ಸಿಇಒ ವಿಲಿಯಂ ಸ್ಕಾಟ್ ಪಿಂಕ್ನಿ ಅವರನ್ನು ಇದೀಗ ಖಮ್ಮಂ ಪೊಲೀಸರು ಬಂಧಿಸಿದ್ದಾರೆ.
ಆ್ಯಮ್ವೇ ಇಂಡಿಯಾ ವಿರುದ್ಧ ಆಂಧ ಪ್ರದೇಶದ ವಿವಿಧ ಕಡೆಗಳಲ್ಲಿ ಒಂಬತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಕರ್ನೂಲ್ ಪೊಲೀಸರಿಂದ ಸೋಮವಾರ ಬಂಧನಕ್ಕೆ ಒಳಗಾಗಿದ್ದ ವಿಲಿಯಂ ಅವರನ್ನು ಕಡಪ ಜೈಲಿನಲ್ಲಿ ಇರಿಸಲಾಗಿತ್ತು.