ಕುಮಟಾ (ಉತ್ತರ ಕನ್ನಡ ಜಿಲ್ಲೆ): ಪಟ್ಟಣದಲ್ಲಿ ಹಳಗನ್ನಡದ ಶಿಲಾ ಶಾಸನವೊಂದು ಸೋಮವಾರ ಪತ್ತೆಯಾಗಿದೆ.
ಇಲ್ಲಿನ ಬಸ್ತಿಪೇಟೆಯಲ್ಲಿರುವ ಅಚ್ಯುತ್ ಪಂಡಿತ ಆಸ್ಪತ್ರೆ ಎದುರಿನ ರಸ್ತೆಯ ಚರಂಡಿ ಮುಚ್ಚಲು ಶಾಸನವುಳ್ಳ ಈ ಶಿಲೆಯನ್ನು ಬಳಸಲಾಗಿತ್ತು.
‘ಹಳಗನ್ನಡ ಅಕ್ಷರಗಳ ಒಟ್ಟು 39 ಸಾಲುಗಳಿರುವ ಶಿಲಾ ಶಾಸನ ಸಾಮ್ರಾಟ್ ಅಶೋಕನಿಂದ ಮುಂದೆ ವಿಜಯನಗರ ಅರಸರ ಕಾಲದವರೆಗೆ ಸಂಬಂಧಿಸಿದ್ದು ಇರಬಹುದು. ಚರಂಡಿಗೆ ಮುಚ್ಚಿದ್ದ ಶಿಲೆಯ ಮೇಲೆ ವಾಹನಗಳು ಓಡಾಡಿದ್ದರಿಂದ ಅದರ ಮೇಲೆ ಬರೆದ ಅಕ್ಷರಗಳು ಅಲ್ಲಲ್ಲಿ ಅಳಿಸಿ ಹೋಗಿವೆ.