ಕೆಪಿಎಸ್ಸಿಯ ಕಳ೦ಕಿತ ನಡೆ ಮನೆಮಾತಾಗಿದೆ. ಸರ್ಕಾರ ಇದನ್ನು ಸರಿಪಡಿಸುವ ಪ್ರಯತ್ನದಲ್ಲಿ ಅಚಲವಾಗಿದ್ದರೆ ಮೊದಲು ಕಳ೦ಕಿತರನ್ನು ಮನೆಗೆ ಕಳಿಸಿ ನೇಮಕಾತಿಗಳನ್ನು ಮು೦ದುವರಿಸಲಿ. ಇಲ್ಲದಿದ್ದರೆ ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಹೊಸ ಅಧ್ಯಾಯದ ಆರಂಭಕ್ಕೆ ಸೋಲುಂಟಾಗುತ್ತದೆ. ಆಗ ಜನ ಹತಾಶರಾಗುತ್ತಾರೆ.
ಕೆಪಿಎಸ್ಸಿಯನ್ನು ಸರಿ ದಾರಿಗೆ ತರುವುದರಲ್ಲಿ ರಾಜ್ಯದ ಏಳಿಗೆಯ ಮೂಲ ಇರುವುದರಿಂದ ಅಲ್ಲಿ ಹಿತಾಸಕ್ತಿಗಳ ಸಂಘರ್ಷ, ಪಟ್ಟಭದ್ರ ಹಿತಾಸಕ್ತಿಗಳ ಮೇಲಾಟ, ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅಲ್ಲಿಯವರೆಗೂ ರಾಜ್ಯಕ್ಕೆ ಒಳ್ಳೆಯ ದಿನಗಳು ಗಗನಕುಸುಮ.