ಕುಣಿಗಲ್: ತಾಯಿ, ಮಕ್ಕಳಿಬ್ಬರು ಪಟ್ಟಣದ ದೊಡ್ಡಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಬೇಗೂರಿನ ನಾಗರಾಜು ಪತ್ನಿ ಮಂಜುಳಾ( 38) ಹಾಗೂ ಮಕ್ಕಳಾದ ಹೇಮಾಶ್ರೀ (5) ಭವ್ಯಾಶ್ರೀ (3) ಮೃತಪಟ್ಟವರು.ಶನಿವಾರ ಮಧ್ಯಾಹ್ನ ತವರು ಮನೆ ಕಪನಿಪಾಳ್ಯ ಹೋಗುವುದಾಗಿ ಮಂಜುಳಾ ಅವರು ಪತಿಗೆ ತಿಳಿಸಿದ್ದರು. ರಾತ್ರಿಯಾದರೂ ಮಾಹಿತಿ ದೊರೆಯದ ಕಾರಣ ಅವರ ಪತಿ ನಾಗರಾಜು ಕುಣಿಗಲ್ ಠಾಣೆಗೆ ದೂರು ನೀಡಿದ್ದರು.
ಭಾನುವಾರ ಬೆಳಿಗ್ಗೆ ದೊಡ್ಡಕೆರೆಯ ಬಳಿ ಚಪ್ಪಲಿಗಳು ತೇಲುತ್ತಿದ್ದವು. ಪರಿಶೀಲನೆ ನಡೆಸಿದಾಗ ಇವರ ಶವಗಳು ಪತ್ತೆಯಾಗಿವೆ ಎಂದು ಕುಣಿಗಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.