ತಿರುವನಂತಪುರ (ಪಿಟಿಐ): ರಾಜ್ಯದಲ್ಲಿ ಮದ್ಯದ ಲಭ್ಯತೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದಕ್ಕಾಗಿ ಪಂಚತಾರಾ ಹೋಟೆಲ್ ಮಟ್ಟಕ್ಕಿಂತ ಕೆಳಗಿನ ಬಾರ್ಗಳನ್ನು ಸೆಪ್ಟೆಂಬರ್ 12ರೊಳಗೆ ಮುಚ್ಚುವಂತೆ ಬಾರ್ ಮಾಲೀಕರಿಗೆ ನೋಟಿಸ್ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಬಾರ್ಗಳನ್ನು ಮುಚ್ಚುವ ನಿರ್ಧಾರವನ್ನು ಕಳೆದ ವಾರ ಕೈಗೊಂಡಿದೆ. ಅದರಂತೆ ಆಗಸ್ಟ್ 28ರಂದು ಬಾರ್ಗಳಿಗೆ ನೋಟಿಸ್ ನೀಡಲಾಗುವುದು. ಬಾರ್ಗಳನ್ನು ಮುಚ್ಚಲು 15 ದಿನ ಸಮಯ ನೀಡಲಾಗುವುದು. ಸೌಲಭ್ಯಗಳ ಕೊರತೆಯ ಕಾರಣಕ್ಕೆ ಏಪ್ರಿಲ್ನಿಂದ ಮುಚ್ಚಲಾಗಿದ್ದ 412 ಬಾರ್ಗಳ ಪರವಾನಗಿ ನವೀಕರಿಸದಿರಲು ಸರ್ಕಾರ ನಿರ್ಧರಿಸಿದೆ. ಪಂಚತಾರಾ ಹೊಟೇಲ್ಗಳಲ್ಲಿರುವ 20 ಬಾರ್ಗಳು ಮಾತ್ರ ನಂತರ ಉಳಿಯಲಿವೆ.