ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಬಾರ್‌ಗಳು ಬಂದ್‌

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ರಾಜ್ಯದಲ್ಲಿ ಮದ್ಯದ ಲಭ್ಯತೆಯನ್ನು ಗಣನೀಯ ಪ್ರಮಾಣ­ದಲ್ಲಿ ಕಡಿಮೆ ಮಾಡು­­­ವುದ­ಕ್ಕಾಗಿ ಪಂಚತಾರಾ ಹೋಟೆಲ್‌ ಮಟ್ಟಕ್ಕಿಂತ ಕೆಳಗಿನ ಬಾರ್‌­ಗಳನ್ನು ಸೆಪ್ಟೆಂಬರ್‌ 12­ರೊ­ಳಗೆ ಮುಚ್ಚುವಂತೆ ಬಾರ್‌ ಮಾಲೀಕರಿಗೆ ನೋಟಿಸ್‌ ನೀಡಲು ಕೇರಳ ಸರ್ಕಾರ ನಿರ್ಧ­ರಿಸಿದೆ. 

ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರ್ಕಾರ ಬಾರ್‌ಗಳನ್ನು ಮುಚ್ಚುವ ನಿರ್ಧಾ­ರವನ್ನು ಕಳೆದ ವಾರ ಕೈಗೊಂ­ಡಿದೆ. ಅದರಂತೆ ಆಗಸ್ಟ್‌ 28­ರಂದು  ಬಾರ್‌­ಗಳಿಗೆ ನೋಟಿಸ್‌ ನೀಡ­ಲಾ­ಗು­ವುದು. ಬಾರ್‌ಗಳನ್ನು ಮುಚ್ಚಲು 15 ದಿನ ಸಮಯ ನೀಡ­ಲಾ­ಗು­ವುದು. ಸೌಲಭ್ಯಗಳ ಕೊರತೆಯ ಕಾರ­ಣಕ್ಕೆ ಏಪ್ರಿಲ್‌ನಿಂದ ಮುಚ್ಚಲಾಗಿದ್ದ 412 ಬಾರ್‌­­ಗಳ ಪರವಾನಗಿ ನವೀ­ಕರಿಸ­ದಿರಲು ಸರ್ಕಾರ ನಿರ್ಧರಿಸಿದೆ. ಪಂಚತಾರಾ ಹೊಟೇಲ್‌­ಗಳಲ್ಲಿರುವ 20 ಬಾರ್‌­ಗಳು ಮಾತ್ರ ನಂತರ ಉಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT