ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯರ್‌ನಲ್ಲಿ ಮರಳಿದ ಕಳವಾದ ಚಿನ್ನ!

Last Updated 26 ನವೆಂಬರ್ 2014, 20:06 IST
ಅಕ್ಷರ ಗಾತ್ರ

ಮೈಸೂರು: ಕಳವು ಮಾಡಿದ ಚಿನ್ನಾ­ಭರಣ­­­ವನ್ನು ಕ್ಷಮಾಪಣಾ ಪತ್ರ­ದೊಂದಿಗೆ ಕೊರಿಯರ್ ಮೂಲಕ ಮರ­ಳಿ­ಸಿದ ಅಪರೂಪದ ಪ್ರಕರಣ­ವೊಂದು ಸರಸ್ವತಿಪುರಂ ಠಾಣಾ ವ್ಯಾಪ್ತಿ­ಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸುಮಾರು ₨ 8 ಲಕ್ಷ ಮೌಲ್ಯದ ಆಭರ­ಣಗಳ ಪೈಕಿ 207 ಗ್ರಾಂ ಚಿನ್ನವನ್ನು ಹಿಂತಿ­ರುಗಿಸಿದ್ದು, ಉಳಿದ 90 ಗ್ರಾಂ ಚಿನ್ನ ಮತ್ತು 1.5 ಕೆ.ಜಿ. ಬೆಳ್ಳಿ ಸಾಮಗ್ರಿಯನ್ನು ಮರ­ಳಿಸಲು 3 ತಿಂಗಳ ಕಾಲಾವಕಾಶ­ವನ್ನು ಕೇಳಿದ್ದಾರೆ. ಈ ನಡುವೆ ದುಷ್ಕರ್ಮಿ­ಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ಏನಿದು ಪ್ರಕರಣ: ಜೆಎಸ್‌ಎಸ್‌ ಅಂಗ­ವಿಕಲರ ಪಾಲಿ­ಟೆ­ಕ್ನಿಕ್‌ ಕಾಲೇಜಿನ ಪ್ರಾಧ್ಯಾ­ಪಕ, ತೊಣಚಿ­ಕೊಪ್ಪಲು ಬಡಾವಣೆಯ 1ನೇ ಕ್ರಾಸ್‌ ನಿವಾಸಿ ನಂಜುಂಡಸ್ವಾಮಿ ಅವರು ತಮ್ಮ ಪುತ್ರಿ ಪೂಜಾ ವಿವಾಹಕ್ಕೆ ಚಿನ್ನಾಭರಣ ಖರೀ­­ದಿಸಿದ್ದರು. ನ. 18ರಂದು ನಿಶ್ಚಯ­ವಾ­­ಗಿದ್ದ ಮದುವೆಗೆ ಆಹ್ವಾನ ಪತ್ರ ವಿತರಿ­ಸಲು ನ. 2ರಂದು ಬೆಳಿಗ್ಗೆ ಬೆಂಗಳೂರಿಗೆ ತೆರಳಿ­ದ್ದರು.

ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿ­ಯಾಗಿ­ರುವ ಅವರ ಪುತ್ರ ಚಂದನ್‌ ಮಾತ್ರ ಮನೆಯಲ್ಲಿದ್ದರು. ಈ ವೇಳೆ ಮನೆಗೆ ಬಂದ ಚಂದನ್‌ ಸ್ನೇಹಿತರು ನ. 3ರವರೆಗೆ ಜೊತೆಯಲ್ಲಿದ್ದರು. ಬೆಂಗ­ಳೂರಿಗೆ ಮರಳಲು ಚಂದನ್‌ ಮನೆಯ ಬಾಗಿಲು ಹಾಕಿ ಕೀಯನ್ನು ಸ್ಕೂಟರ್‌­ನ­ಲ್ಲಿಟ್ಟು, ದ್ವಿಚಕ್ರ ವಾಹನದ ಕೀ ಅನ್ನು ಮನೆಯ ಕಿಟಕಿಯಲ್ಲಿಟ್ಟಿದ್ದರು.

ನ. 3ರಂದು ಮಧ್ಯಾಹ್ನ ನಂಜುಂಡ­ಸ್ವಾಮಿ ಅವರ ಮನೆಯ ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿತ್ತು. ಅನುಮಾನ­ಗೊಂಡ ಮನೆಯ ಮಾಲೀಕರು ನಂಜುಂಡ­­ಸ್ವಾಮಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಸಂಜೆ ಅವರು ಮರಳಿದಾಗ ಚಿನ್ನಾಭರಣ ಕಳ­ವಾ­­ಗಿರುವುದು ಬೆಳಕಿಗೆ ಬಂದಿತ್ತು. ಮನೆ ಬೀಗ ತೆಗೆದು ಒಳ ನುಗ್ಗಿದ ದುಷ್ಕ­ರ್ಮಿ­ಗಳು ಕಬೋರ್ಡ್‌ನಲ್ಲಿದ್ದ ಚಿನ್ನಾಭರಣ
ಗ­ಳನ್ನು ದೋಚಿ ಪರಾರಿಯಾಗಿದ್ದರು.

ಎರಡೇ ದಿನದಲ್ಲಿ ವಾಪಸ್‌: ಘಟನೆ ನಡೆದು ಎರಡು ದಿನಗಳ ಬಳಿಕ ನಂಜುಂಡ­­ಸ್ವಾಮಿ ಅವರ ಮನೆಗೆ ಕೊರಿ­ಯರ್‌­ವೊಂದು ಬಂತು. ವಿ.ವಿ. ಮೊಹಲ್ಲಾ­­ದಿಂದ ನ. 5ರಂದು ರವಾನೆ­ಯಾದ ಈ ಕೊರಿಯರ್‌ನಲ್ಲಿ 220 ಗ್ರಾಂ ಚಿನ್ನಾಭರಣದ ಜೊತೆಗೆ ಪತ್ರ­ವೊಂದಿತ್ತು.
ವಿವಾಹಕ್ಕೆ ಖರೀದಿ ಮಾಡಿದ ಚಿನ್ನಾ­ಭರಣ ಮರಳಿ ಸಿಕ್ಕಿದ್ದು ನಂಜುಂಡಸ್ವಾಮಿ ಅವರ ಕುಟುಂಬಕ್ಕೆ ಸಮಾಧಾನ ಉಂಟು ಮಾಡಿತು. ಆದರೆ, ಪತ್ರದಲ್ಲಿದ್ದ ಸಾರಾಂಶ ಹಲವು ಸಂಶಯಗಳನ್ನು ಹುಟ್ಟು ಹಾಕಿತು.

‘ನನ್ನ ಪುತ್ರ ತಪ್ಪು ಮಾಡಿದ್ದಾನೆ. ಉಳಿದ ಚಿನ್ನಾಭರಣಗಳನ್ನು ಕೆಲವೇ ದಿನ­ಗ­ಳಲ್ಲಿ ಹಿಂತಿರುಗಿಸುತ್ತೇವೆ. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೊಲೀ­ಸ­ರಿಗೆ ನೀಡಿದ ದೂರನ್ನು ಹಿಂಪ­ಡೆಯಿರಿ’ ಎಂದು ರಮೇಶ್‌ ಎಂಬುವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸ್ನೇಹಿತರ ಮೇಲೆ ಶಂಕೆ: ತನಿಖೆ ಚುರುಕು­ಗೊ­ಳಿಸಿರುವ ಪೊಲೀ­ಸರು ಘಟನೆ ನಡೆದ ದಿನ ಚಂದನ್‌ ಅವ­ರೊಂದಿಗೆ ತಂಗಿದ್ದ ಸ್ನೇಹಿ­ತರ ಮೇಲೆ ಶಂಕೆ ವ್ಯಕ್ತ­ಪಡಿಸಿದ್ದಾರೆ. ಸ್ನೇಹಿತ­ರನ್ನು ಕರೆಸಿ ವಿಚಾರಣೆಗೆ ಒಳ­ಪಡಿಸಿ­­ದ್ದಾರೆ. ಈ ನಡುವೆ ಪ್ರಕರಣವನ್ನು ಹಿಂಪಡೆ­ಯು­ವಂತೆ ನಂಜುಂಡಸ್ವಾಮಿ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT