ಆದರೆ, ಈಗಿನ ಪರಿಸ್ಥಿತಿಯೇ ಬೇರೆ. ಕೆರೆಯಲ್ಲಿ ಸಾಕಷ್ಟು ನೀರು ಇಲ್ಲದೆ ಕೆರೆ ತುಂಬ ಕಸ–ಕಡ್ಡ,ಿ ತ್ಯಾಜ್ಯ ವಸ್ತುಗಳು ಹಾಗೂ ಹೂಳು ತುಂಬಿಕೊಂಡಿದೆ. ನೀರು ಕಲುಷಿತಗೊಂಡಿದೆ, ಕೆರೆ ಹಾಳಾಗಿದೆ. ಇದಕ್ಕೆ ಕಾರಣ ಕೆರೆಯ ನಿರ್ವಹಣೆ ಸರಿಯಾಗಿಲ್ಲದಿರುವುದು. ನೀರು ಹರಿದು ಬರುತ್ತಿದ್ದ ಮೂಲಗಳು ಮುಚ್ಚಿಹೋಗಿವೆ. ಮುಂದಿನ ಬೇಸಿಗೆಗೆ ಕೆರೆ ಬತ್ತಿ ಹೋಗುವ ಸಾಧ್ಯತೆಗಳು ಇವೆ.
ಆದ ಕಾರಣ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೆರೆಯಲ್ಲಿ ತುಂಬಿರುವ ತ್ಯಾಜ್ಯ ವಸ್ತುಗಳನ್ನು ತ್ವರಿತವಾಗಿ ತೆಗೆಸಿ ಸ್ವಚ್ಛಗೊಳಿಸಬೇಕು. ಮಳೆ ನೀರು ಕೆರೆಗೆ ಹರಿದು ಬರುವ ಮೂಲಗಳನ್ನು ಗುರುತಿಸಿ ಕೆರೆ ಮೊದಲಿನಂತೆ ಕಂಗೊಳಿಸುವಂತೆ ಮಾಡಬೇಕು.
–ಲಕ್ಷ್ಮೀಪತಿ ಮಾವಳ್ಳಿ, ಬೆಂಗಳೂರು