<p><span style="font-size: 26px;">ಜಮ್ಮು (ಪಿಟಿಐ): ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಿಭಾಗದ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ನೆಲದೊಳಕ್ಕೆ ನುಗ್ಗಿ ಉದ್ಧಟತನ ಹಾಗೂ ಪ್ರಚೋದನಾತ್ಮಕ ದಾಳಿ ನಡೆಸಿ ಭಾರತದ ಐವರು ಕಾವಲು ನಿರತ ಯೋಧರನ್ನು ಕೊಂದು ಹಾಕಿದ ಘಟನೆ ಮಂಗಳವಾರ ನಸುಕಿನಲ್ಲಿ ಘಟಿಸಿದೆ.</span><br /> <br /> ಈ ವಿಚಾರವು ಈದಿನ ಸಂಸತ್ತಿನಲ್ಲಿ ಪ್ರತಿಧ್ವನಿಸಿ ಕಲಾಪ ಅಸ್ತವ್ಯಸ್ತಗೊಂಡಿತು. ಉಭಯ ಸದನಗಳಲ್ಲೂ ಸದಸ್ಯರು ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಕಟು ಪ್ರತಿಕ್ರಿಯೆ ನೀಡಬೇಕು ಎಂದು ಬಲವಾಗಿ ಆಗ್ರಹಿಸಿದರು. ಕೋಲಾಹಲದ ಮಧ್ಯೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.<br /> <br /> ಸುಮಾರು 20ರಷ್ಟು ಸಂಖ್ಯೆಯಲ್ಲಿದ್ದ ಪಾಕಿಸ್ತಾನಿ ಸೈನಿಕರು ಮಧ್ಯರಾತ್ರಿಯ ಬಳಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲದೊಳಕ್ಕೆ ನುಗ್ಗಿ ಬಂದು ಸರ್ಲಾ ಪೋಸ್ಟ್ ನಲ್ಲಿ ಕಾವಲು ನಿರತರಾಗಿದ್ದ ಭಾರತೀಯ ಯೋಧರ ತಂಡದ ಮೇಲೆ ದಾಳಿ ನಡೆಸಿದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ.<br /> <br /> ನಸುಕಿನ 2 ಗಂಟೆ ಸುಮಾರಿಗೆ ನಡೆದ ಈ ದಾಳಿಯಲ್ಲಿ 21 ಬಿಹಾರ ಘಟಕದ ಒಬ್ಬ ಸುಭೇದಾರ್ ಮತ್ತು ನಾಲ್ವರು ಯೋಧರು ಹತರಾದರು ಎಂದು ಮೂಲಗಳು ತಿಳಿಸಿದವು.<br /> <br /> ಗಡಿ ನಿಯಂತ್ರಣ ರೇಖೆಯಿಂದ ಸುಮಾರು 450 ಮೀಟರ್ ನಷ್ಟು ದೂರದಲ್ಲಿ ಭಾರತೀಯ ನೆಲದಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಹೇಳಿದವು.<br /> <br /> 'ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಐವರು ಯೋಧರನ್ನು ಹತ್ಯೆಗೈದ ವಿಚಾರವನ್ನು ಈ ದಿನ ನಸುಕಿನಲ್ಲಿ ನನಗೆ ತಿಳಿಸಲಾಗಿದೆ. ಅವರ ಕುಟುಂಬ ಸದಸ್ಯರಿಗೆ ನಾನು ನನ್ನ ದುಃಖಭರಿತ ಸಂತಾಪ ವ್ಯಕ್ತ ಪಡಿಸುತ್ತಿದ್ದೇನೆ' ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಘಟನೆ ಬಗ್ಗೆ ಟ್ವಿಟ್ಟರ್ ಸಂದೇಶ ನೀಡಿದ್ದಾರೆ.<br /> <br /> 'ಈ ಘಟನೆಗಳು ಪಾಕ್ ಜೊತೆಗಿನ ಬಾಂಧವ್ಯ ವೃದ್ಧಿ ಬಿಡಿ ಬಾಂಧವ್ಯ ಮಾಮೂಲುಗೊಳಿಸುವ ಯತ್ನಕ್ಕೂ ಧಕ್ಕೆ ಉಂಟು ಮಾಡುತ್ತವೆ' ಎಂದು ಅವರು ಹೇಳಿದ್ದಾರೆ.<br /> <br /> ಸೇನಾ ದಂಡನಾಯಕ ಜನರಲ್ ಬಿಕ್ರಮ್ ಸಿಂಗ್ ಅವರು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ ಎಂದು ದೆಹಲಿಯಲ್ಲಿ ಸೇನಾ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ಜಮ್ಮು (ಪಿಟಿಐ): ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಿಭಾಗದ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ನೆಲದೊಳಕ್ಕೆ ನುಗ್ಗಿ ಉದ್ಧಟತನ ಹಾಗೂ ಪ್ರಚೋದನಾತ್ಮಕ ದಾಳಿ ನಡೆಸಿ ಭಾರತದ ಐವರು ಕಾವಲು ನಿರತ ಯೋಧರನ್ನು ಕೊಂದು ಹಾಕಿದ ಘಟನೆ ಮಂಗಳವಾರ ನಸುಕಿನಲ್ಲಿ ಘಟಿಸಿದೆ.</span><br /> <br /> ಈ ವಿಚಾರವು ಈದಿನ ಸಂಸತ್ತಿನಲ್ಲಿ ಪ್ರತಿಧ್ವನಿಸಿ ಕಲಾಪ ಅಸ್ತವ್ಯಸ್ತಗೊಂಡಿತು. ಉಭಯ ಸದನಗಳಲ್ಲೂ ಸದಸ್ಯರು ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಕಟು ಪ್ರತಿಕ್ರಿಯೆ ನೀಡಬೇಕು ಎಂದು ಬಲವಾಗಿ ಆಗ್ರಹಿಸಿದರು. ಕೋಲಾಹಲದ ಮಧ್ಯೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.<br /> <br /> ಸುಮಾರು 20ರಷ್ಟು ಸಂಖ್ಯೆಯಲ್ಲಿದ್ದ ಪಾಕಿಸ್ತಾನಿ ಸೈನಿಕರು ಮಧ್ಯರಾತ್ರಿಯ ಬಳಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲದೊಳಕ್ಕೆ ನುಗ್ಗಿ ಬಂದು ಸರ್ಲಾ ಪೋಸ್ಟ್ ನಲ್ಲಿ ಕಾವಲು ನಿರತರಾಗಿದ್ದ ಭಾರತೀಯ ಯೋಧರ ತಂಡದ ಮೇಲೆ ದಾಳಿ ನಡೆಸಿದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ.<br /> <br /> ನಸುಕಿನ 2 ಗಂಟೆ ಸುಮಾರಿಗೆ ನಡೆದ ಈ ದಾಳಿಯಲ್ಲಿ 21 ಬಿಹಾರ ಘಟಕದ ಒಬ್ಬ ಸುಭೇದಾರ್ ಮತ್ತು ನಾಲ್ವರು ಯೋಧರು ಹತರಾದರು ಎಂದು ಮೂಲಗಳು ತಿಳಿಸಿದವು.<br /> <br /> ಗಡಿ ನಿಯಂತ್ರಣ ರೇಖೆಯಿಂದ ಸುಮಾರು 450 ಮೀಟರ್ ನಷ್ಟು ದೂರದಲ್ಲಿ ಭಾರತೀಯ ನೆಲದಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಹೇಳಿದವು.<br /> <br /> 'ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಐವರು ಯೋಧರನ್ನು ಹತ್ಯೆಗೈದ ವಿಚಾರವನ್ನು ಈ ದಿನ ನಸುಕಿನಲ್ಲಿ ನನಗೆ ತಿಳಿಸಲಾಗಿದೆ. ಅವರ ಕುಟುಂಬ ಸದಸ್ಯರಿಗೆ ನಾನು ನನ್ನ ದುಃಖಭರಿತ ಸಂತಾಪ ವ್ಯಕ್ತ ಪಡಿಸುತ್ತಿದ್ದೇನೆ' ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಘಟನೆ ಬಗ್ಗೆ ಟ್ವಿಟ್ಟರ್ ಸಂದೇಶ ನೀಡಿದ್ದಾರೆ.<br /> <br /> 'ಈ ಘಟನೆಗಳು ಪಾಕ್ ಜೊತೆಗಿನ ಬಾಂಧವ್ಯ ವೃದ್ಧಿ ಬಿಡಿ ಬಾಂಧವ್ಯ ಮಾಮೂಲುಗೊಳಿಸುವ ಯತ್ನಕ್ಕೂ ಧಕ್ಕೆ ಉಂಟು ಮಾಡುತ್ತವೆ' ಎಂದು ಅವರು ಹೇಳಿದ್ದಾರೆ.<br /> <br /> ಸೇನಾ ದಂಡನಾಯಕ ಜನರಲ್ ಬಿಕ್ರಮ್ ಸಿಂಗ್ ಅವರು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ ಎಂದು ದೆಹಲಿಯಲ್ಲಿ ಸೇನಾ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>