ಇಸ್ಲಾಮಾಬಾದ್/ನವದೆಹಲಿ (ಐಎಎನ್ಎಸ್): ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ ಶಮನಕ್ಕೆ ಭಾರತ, ಪಾಕಿಸ್ತಾನ ಸೇನೆ ಮಂಗ-ಳವಾರ ಪರಸ್ಪರ ಒಪ್ಪಿಗೆ ಸೂಚಿಸಿವೆ.
ಪಾಕಿಸ್ತಾನ ಪದೇ ಪದೇ ಕದನ ವಿರಾಮ ಒಪ್ಪಂದ ಉಲ್ಲಂಘಿಸುತ್ತಿರುವ ಬಗ್ಗೆಯೂ ಭಾರತ ಇದೇ ವೇಳೆ ಪ್ರತಿಭಟನೆ ವ್ಯಕ್ತಪಡಿಸಿತು.
ಮಂಗಳವಾರ ಬೆಳಿಗ್ಗೆ ಹಾಟ್ಲೈನ್ನಲ್ಲಿ ಮಾತನಾಡಿದ ಉಭಯ ರಾಷ್ಟ್ರಗಳ ಸೇನಾ ಕಾರ್ಯಾಚರಣೆ ಮಹಾ ನಿರ್ದೇಶಕರು, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ತಿಳಿಗೊಳಿಸುವ ಒಪ್ಪಂದಕ್ಕೆ ಬಂದಿದ್ದಾರೆ. ಪಾಕಿಸ್ತಾನದ ಸೇನಾ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ಮಧ್ಯೆ ನಡೆದಿರುವ ಮಾತುಕತೆಯನ್ನು ದೃಢಪಡಿಸಿದ್ದಾರೆ.
ಕೇಳದ ಗುಂಡಿನ ಸದ್ದು
ಜಮ್ಮು (ಪಿಟಿಐ): ಹದಿನೈದು ದಿನ ಗಳಿಂದ ಗುಂಡಿನ ಸದ್ದು ಕೇಳುತ್ತಿದ್ದ ಜಮ್ಮು ವಲಯದ ಗಡಿಯಲ್ಲಿ ಮಂಗಳ ವಾರ ಶಾಂತ ವಾತಾವರಣ ನೆಲೆಸಿತ್ತು.
ಪಾಕ್ ಪಡೆಗಳ ನಿರಂತರ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಮೃತಪಟ್ಟು, 17 ಜನರಿಗೆ ಗಾಯವಾಗಿತ್ತು.
ಗಡಿಯಲ್ಲಿನ ಪ್ರಕ್ಷುಬ್ಧತೆಯಿಂದಾಗಿ ತಮ್ಮ ಗ್ರಾಮಗಳನ್ನು ತೊರೆದು ಬೇರೆಡೆ ಹೋಗಿದ್ದ ನಿವಾಸಿಗಳು ಮತ್ತೆ ತಮ್ಮ ಹಳ್ಳಿಗಳತ್ತ ಬರುತ್ತಿದ್ದಾರೆ.