ಘಟನೆಯ ವಿವರ: ಗ್ರಾಮದ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಪಂಚಾಯಿತಿ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ಆಯೋಜಿಸಿದ್ದ, ‘ಚುನಾವಣಾ ಪ್ರವಾಸ’ ಮುಗಿಸಿಕೊಂಡು ಶನಿವಾರ ನೇರವಾಗಿ ಪಂಚಾಯಿತಿ ಕಚೇರಿಗೆ ಬಂದರು ಎನ್ನಲಾಗಿದೆ. ಆ ವೇಳೆ ಕೆಲ ಕಾಂಗ್ರೆಸ್ ಬೆಂಬಲಿಗರು ಹಾಗೂ ಪಂಚಾಯಿತಿ ಸದಸ್ಯ ಮಹೇಶ್, ಜೆಡಿಎಸ್ ಬೆಂಬಲಿತ ಸದಸ್ಯರ ಮೇಲೆ ಖಾರದ ಪುಡಿ ಎರಚಿದಾಗ ಘರ್ಷಣೆ ಆರಂಭವಾ ಯಿತು ಎನ್ನಲಾಗಿದೆ.
ಘರ್ಷಣೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಅನಿವಾರ್ಯವಾಗಿ ಅಶ್ರು ವಾಯು ಸಿಡಿಸಿ, ಲಾಠಿಪ್ರಹಾರ ನಡೆಸ ಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಸಾರ್ವಜ ನಿಕರು ಸೇರಿ, ಹುಣಸೂರು ಸಿಪಿಐ ಧರ್ಮೇಂದ್ರ, ಕಾನ್ಸ್ಟೆಬಲ್ಗಳಾದ ಆನಂದ್, ಪುರು ಷೋತ್ತಮ, ಶಿವಣ್ಣ ಮತ್ತು ಬಸವಣ್ಣ ಗಾಯಗೊಂಡಿದ್ದಾರೆ.