ಚಿಕ್ಕಬಳ್ಳಾಪುರ: ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿ ಕಚೇರಿಯಿಂದ 100 ಮೀಟರ್ ಅಂತರದವರೆಗೆ ನಿಷೇಧಾಜ್ಞೆ ಬಗ್ಗೆ ನಿಯಮಾವಳಿಯಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ನಾಮಪತ್ರ ಸಲ್ಲಿಸುತ್ತಿವಾಗ ಪುತ್ರ ಹರ್ಷ ಮೊಯಿಲಿ ಸೇರಿದಂತೆ ಕಾಂಗ್ರೆಸ್ನ ಬಹುತೇಕ ಮುಖಂಡರು ಮತ್ತು ಕಾರ್ಯಕರ್ತರು ಚುನಾವಣಾಧಿಕಾರಿ ಕಚೇರಿ ಬಾಗಿಲು ಬಳಿಯೇ ದೀರ್ಘ ಕಾಲದವರೆಗೆ ನಿಂತಿದ್ದರು. ಪೊಲೀಸರು ಸ್ಥಳದಲ್ಲೇ ಇದ್ದರೂ ಮುಖಂಡರನ್ನು ಅಲ್ಲಿಂದ ಚದುರಿಸಲಿಲ್ಲ.