ನಮಗೆ ಯಾವಾಗ ಮನ್ನಣೆಯ ದಾಹ ಹೆಚ್ಚಾಗುತ್ತದೆಯೋ ಆಗ ಮಾತ್ರ ಕೆಲಸ ಮಾಡಿ ನಂತರ ಸುಮ್ಮನಾಗುತ್ತೇವೆ. ಮನ್ನಣೆ ದಾಹವನ್ನು ಬದಿಗೊತ್ತಿ ಜಪಾನ್ನಂತೆ ಸಾಮಾಜಿಕ ಕೆಲಸಗಳನ್ನು ಒಗ್ಗೂಡಿ ಮಾಡುವ ದಿನಗಳು ನಮ್ಮಲ್ಲಿ ಯಾವಾಗ ಬರುತ್ತವೋ? ಆ ದೇಶದ ನಾಗರಿಕರಂತೆ ದೇಶದ ಕೆಲಸ ಸ್ವಂತದ ಕೆಲಸ ಎಂಬ ಅರಿವು ಅನುಷ್ಠಾನಕ್ಕೆ ಬಂದಾಗ ಮಾತ್ರ ದೇಶ ಉದ್ಧಾರವಾಗುತ್ತದೆ .