ಉಡುಪಿ: 76ಬಡಗಬೆಟ್ಟು ಗ್ರಾಮದ ಚಿಟ್ಪಾಡಿ ಗೋಕುಲ್ದಾಸ್ ಕಾಂಪೌಂಡ್ ಬಳಿ ಜೂಜು ಆಡುತ್ತಿದ್ದ ಆರೋಪದ ಮೇಲೆ 9 ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಕಣಗಿನಾಳದ ಬಸವರಾಜ (22), ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇಮಾಗಿ ತಾಂಡದ ಕುಮಾರ (19), ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಾವಿನ ಇಟಗಿಯ ಮಂಜುನಾಥ ರಾಥೋಡ (20), ಹುನಗುಂದ ತಾಲ್ಲೂಕಿನ ಶರಣಪ್ಪ ದ್ಯಾಮಪ್ಪ ಕೊಂತ (25), ಬಾಗಲಕೋಟೆಯ ಕೆರ್ಸೂರಿನ ಸಿದ್ದು ಶರಣಪ್ಪ ಮೂಲಿಮನಿ (24), ಅರ್ಜುನ ವಸಂತ ಗಅಡಿವಡ್ಡರ (28), ಹನುಮಂತ ಕಾಗಲಗೊಂಬೆ (23), ಹಾವೇರಿಯ ನಾಗಿನಮಟ್ಟಿಯ ಮಲ್ಲೇಶ (31), ರೋಣದ ಜಗದೀಶ ವೀರಪ್ಪ ಗಾಣಿಗೇರ (26) ಬಂಧಿತರು.
ಆರೋಪಿಗಳಿಂದ ₹10,300, ಇಸ್ಪೀಟ್ ಎಲೆಗಳು, ಪೇಪರ್ಶೀಟ್, ಮೊಂಬತ್ತಿ ಜಪ್ತಿ ಮಾಡಿದ್ದಾರೆ. ಎಸ್ಐ ಅನಂತ ಪದ್ಮನಾಭ ಅವರು ಗಸ್ತಿನಲ್ಲಿ ಇರುವಾಗ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.