ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಜಾಟ: 9 ಮಂದಿ ಬಂಧನ ನಗದು, ಸ್ವತ್ತುಗಳು ಜಪ್ತಿ

Last Updated 24 ಮೇ 2016, 5:00 IST
ಅಕ್ಷರ ಗಾತ್ರ

ಉಡುಪಿ: 76ಬಡಗಬೆಟ್ಟು ಗ್ರಾಮದ ಚಿಟ್ಪಾಡಿ ಗೋಕುಲ್‌ದಾಸ್‌ ಕಾಂಪೌಂಡ್‌ ಬಳಿ ಜೂಜು ಆಡುತ್ತಿದ್ದ ಆರೋಪದ ಮೇಲೆ 9 ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಕಣಗಿನಾಳದ ಬಸವರಾಜ (22), ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇಮಾಗಿ ತಾಂಡದ ಕುಮಾರ (19), ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಾವಿನ ಇಟಗಿಯ ಮಂಜುನಾಥ ರಾಥೋಡ (20), ಹುನಗುಂದ ತಾಲ್ಲೂಕಿನ ಶರಣಪ್ಪ ದ್ಯಾಮಪ್ಪ ಕೊಂತ (25), ಬಾಗಲಕೋಟೆಯ ಕೆರ್ಸೂರಿನ ಸಿದ್ದು ಶರಣಪ್ಪ ಮೂಲಿಮನಿ (24), ಅರ್ಜುನ ವಸಂತ ಗಅಡಿವಡ್ಡರ (28), ಹನುಮಂತ ಕಾಗಲಗೊಂಬೆ (23), ಹಾವೇರಿಯ ನಾಗಿನಮಟ್ಟಿಯ ಮಲ್ಲೇಶ (31), ರೋಣದ ಜಗದೀಶ ವೀರಪ್ಪ ಗಾಣಿಗೇರ (26) ಬಂಧಿತರು.

ಆರೋಪಿಗಳಿಂದ ₹10,300, ಇಸ್ಪೀಟ್ ಎಲೆಗಳು, ಪೇಪರ್‌ಶೀಟ್‌, ಮೊಂಬತ್ತಿ ಜಪ್ತಿ ಮಾಡಿದ್ದಾರೆ. ಎಸ್‌ಐ ಅನಂತ ಪದ್ಮನಾಭ ಅವರು ಗಸ್ತಿನಲ್ಲಿ ಇರುವಾಗ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT