ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.31ರಿಂದ ‘ನಮ್ಮೂರ ಹಬ್ಬ’

Last Updated 26 ಜನವರಿ 2015, 20:42 IST
ಅಕ್ಷರ ಗಾತ್ರ

ಬೆಂಗಳೂರು: ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌  ವತಿಯಿಂದ ಕರಾವಳಿ ಭಾಗದ ಸಂಸ್ಕೃತಿ, ಆಚರಣೆಗಳನ್ನು ಪ್ರಚುರ­ಪಡಿ­ಸಲು ಜಯನಗರದ ಶಾಲಿನಿ ಕ್ರೀಡಾಂಗಣ­ದಲ್ಲಿ ಜ.31 ಮತ್ತು 1ರಂದು ಎರಡು ದಿನಗಳ ಕಾಲ ‘ನಮ್ಮೂರ ಹಬ್ಬ– 2015’  ಉತ್ಸವ­ವನ್ನು ಹಮ್ಮಿಕೊಳ್ಳ­ಲಾಗಿದೆ.

ಪತ್ರಿಕಾ­ಗೋಷ್ಠಿಯಲ್ಲಿ  ಟ್ರಸ್ಟ್‌ ಪರವಾಗಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು, ‘ಉತ್ಸವ­ದಲ್ಲಿ  ಕರಾವಳಿ ಪ್ರದೇಶದ ಯಕ್ಷಗಾನ, ಬಯಲಾಟ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯ­ಕ್ರಮಗಳು ನಡೆಯಲಿವೆ’ ಎಂದರು.

‘ಅಭಿನಂದನ ತಂಡದಿಂದ ಸಂಗೀತದ ವಿಶೇಷ ಪ್ರಯೋಗಗಳು ಮತ್ತು ಕರಾವಳಿ ಮೂಲದ ಅಂತರರಾಷ್ಟ್ರೀಯ ಕಲಾವಿದ­ರಿಂದ ಗಾನಸುಧೆ ಕಾರ್ಯಕ್ರಮ ನಡೆಯಲಿದೆ’ ಎಂದರು. ಟ್ರಸ್ಟ್ ನೀಡುವ ‘ಕಿರೀಟ’ ಪ್ರಶಸ್ತಿಗೆ ಹಿರಿಯ ನಟಿ ಲೀಲಾವತಿ ಮತ್ತು ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ ಅವರು ಭಾಜನ­ರಾಗಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT