ನವದೆಹಲಿ (ಐಎಎನ್ಎಸ್): ರಾಷ್ಟ್ರೀಯ ಲೆಕ್ಕಪತ್ರ ಪರಿಶೋಧಕರಾದ ಮಹಾಲೇಖಪಾಲರು (ಸಿಎಜಿ) ಟೆಲಿಕಾಂ ನಿರ್ವಾಹಕರ (ಆಪರೇಟರ್ ಗಳ) ಲೆಕ್ಕಪತ್ರ ಪರಿಶೋಧನೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿತು.
ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ಸುಪ್ರಿಂಕೋರ್ಟ್ ಪೀಠವು ಈ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದು ಮಹಾಲೇಖಪಾಲರು ಟೆಲಿಕಾಂ ಆಪರೇಟರ್ ಗಳ ಆದಾಯ ಪರಿಶೀಲನೆ ಮಾಡಬಹುದು ಎಂದು ಸ್ಪಷ್ಟ ಪಡಿಸಿತು.
ಸರ್ಕಾರದ ವಶದಲ್ಲಿ ಇರುವ ನೈಸರ್ಗಿಕ ಸಂಪನ್ಮೂಲವನ್ನು ಖಾಸಗಿ ಆಪರೇಟರ್ ಗಳ ಸ್ವಾಮ್ಯಕ್ಕೆ ನೀಡಲಾಗುತ್ತದೆ. ಇಂತಹ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮೇಲಿನ ಸಂಸದೀಯ ನಿಯಂತ್ರಣವನ್ನು ಮಹಾಲೇಖಪಾಲರು ಖಾತರಿ ಪಡಿಸುವ ಅಗತ್ಯವಿದೆ ಎಂದು ಕೋರ್ಟ್ ಹೇಳಿತು.