ಕಾರವಾರ: ಕುಮಟಾ ತಾಲ್ಲೂಕಿನ ಬರ್ಗಿ ಗ್ರಾಮದಲ್ಲಿ ಇತ್ತೀಚೆಗೆ ಅಡುಗೆ ಅನಿಲ ಟ್ಯಾಂಕರ್ ಉರುಳಿ ಬಿದ್ದು ಸಂಭವಿಸಿದ ಅಗ್ನಿ ದುರಂತದಲ್ಲಿ ಸುಟ್ಟ ಗಾಯಗಳಿಂದ ಮತ್ತೆ ಇಬ್ಬರು ಗುರುವಾರ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಈಗ 5ಕ್ಕೆ ಏರಿದಂತಾಗಿದೆ.
ಬರ್ಗಿ ಗ್ರಾಮದ ಶಕೀಲಾ ಹರಿಕಂತ್ರ (32) ಹಾಗೂ ಶ್ರೀಕಾಂತ ಪಟಗಾರ (57) ಮೃತಪಟ್ಟಿದ್ದಾರೆ. ಶ್ರೀಕಾಂತ ಸೇರಿದಂತೆ ಅವರ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ದುರಂತ ಸಂಭವಿಸಿ ಮೂರು ದಿನಗಳಾದರೂ ಸಚಿವರು ಹಾಗೂ ಸಂಸದರು ಭೇಟಿ ನೀಡದಿರುವ ಬಗ್ಗೆ ಗ್ರಾಮಸ್ಥರು ಪ್ರತಿಭಟಿಸಿದರು.