ನವದೆಹಲಿ (ಪಿಟಿಐ): ನಿರ್ಭಯಾ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಕೇಂದ್ರ ಸರ್ಕಾರ ವಿಧಿಸಿರುವ ತಡೆ ತೆರವುಗೊಳಿಸುವಂತೆ ಭಾರತೀಯ ಸಂಪಾದಕರ ಸಂಘ (ಎಡಿಟರ್ಸ್ ಗಿಲ್ಡ್) ಮನವಿ ಮಾಡಿದೆ.
ಬಿಬಿಸಿ ವಾಹಿನಿಗೆ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ವಿಧಿಸಿರುವ ತಡೆಯನ್ನು ತೆರವುಗೊಳಿಸಬೇಕೆಂದು ಸಂಘ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಸಾಕ್ಷ್ಯಚಿತ್ರವು ಹಲವು ಆಯಾಮಗಳನ್ನು ಒಳಗೊಂಡಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರ ಅನಿಸಿಕೆ ಹಾಗೂ ಅಪರಾಧಿಯ ಮನೋಭಾವ, ಘಟನೆ ಕುರಿತಂತೆ ವಕೀಲರ ಅಭಿಪ್ರಾಯಗಳನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.