ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಸಿಬಿಐ ಸಮ್ಮತಿ

ಬದಾಯೂಂ ಬಾಲಕಿಯರ ಅತ್ಯಾಚಾರ– ಕೊಲೆ ಪ್ರಕರಣ
Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬದಾಯೂಂ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಬೇಕೆಂಬ ಉತ್ತರ­­ಪ್ರದೇಶ ಸರ್ಕಾರದ ಕೋರಿಕೆ­ಯನ್ನು ಸಿಬಿಐ ಮಂಗಳವಾರ ಸ್ವೀಕ­ರಿಸಿದೆ.

ಪ್ರಕರಣವನ್ನು ಆದಷ್ಟು ಬೇಗ ತನಿಖೆಗೆ ಕೈಗೆತ್ತಿಕೊಳ್ಳಲಿರುವ ಸಿಬಿಐ, ಈ  ಬಗ್ಗೆ ಸಿಬ್ಬಂದಿ ಮತ್ತು ತರಬೇತಿ ಇಲಾ­ಖೆಯ ಔಪಚಾರಿಕ ಅಧಿಸೂಚನೆ­ಗಾಗಿ ಕಾಯು­ತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳಿಗೆ ಅಖಿಲೇಶ್‌ ಸೂಚನೆ (ಲಖನೌ ವರದಿ): ಉತ್ತರ ಪ್ರದೇಶ­ದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪ­ಗಳ ಹಿನ್ನೆಲೆ­ಯಲ್ಲಿ ಮುಖ್ಯಮಂತ್ರಿ ಅಖಿ­ಲೇಶ್‌ ಯಾದವ್‌, ಬದಾ­ಯೂಂ ಮತ್ತು ಕನೌಜ್‌ ಅತ್ಯಾಚಾರ ಪ್ರಕರಣ­ಗಳಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳ­ಬೇಕೆಂದು ಆದೇಶಿಸಿದ್ದಾರೆ.

ಮಂಗಳವಾರ ಉನ್ನತ ಆಡಳಿತಾಂಗ ಮತ್ತು ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ರಾಜ್ಯ­ದಲ್ಲಿ ಭ್ರಷ್ಟ ಮತ್ತು ಸರಿಯಾಗಿ ಕೆಲಸ ಮಾಡದ ಅಧಿ­ಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.ಈ ಮಧ್ಯೆ, ಕಾನೂನು ಮತ್ತು ಸುವ್ಯ­ವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಆದ್ಯತೆ ಆಗಿದ್ದು, ಮಹಿಳೆಯರ ವಿರುದ್ಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿ­ಸ­­­ಬೇಕೆಂದು ಮುಖ್ಯ ಕಾರ್ಯದರ್ಶಿ ಅಲೋಕ್‌ ರಂಜನ್‌ ಸೂಚಿಸಿದ್ದಾರೆ.

ಬಿಎಸ್‌ಪಿ ಸಭಾತ್ಯಾಗ: ಉತ್ತರಪ್ರದೇಶ­ದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದು, ಅಲ್ಲಿನ ಸರ್ಕಾರ ವಜಾಗೊಳಿಸಬೇಕು ಎಂದು ಆರೋಪಿಸಿ ಬಹುಜನಸಮಾಜ ಪಕ್ಷದ ಸಂಸದರು ಮಂಗಳವಾರ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಕುರಿತು ಸಭಾಧ್ಯಕ್ಷರು ಯಾವುದೇ  ಚರ್ಚೆಗೆ ಅವಕಾಶ ನೀಡದೇ ಇದ್ದಾಗ ಪಕ್ಷದ ನಾಯಕಿ ಮಾಯಾವತಿ ನೇತೃತ್ವದಲ್ಲಿ  ಸಭಾತ್ಯಾಗ ಮಾಡಿದರು.

ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ
ಮುಜಪ್ಫರ್‌ನಗರ (ಪಿಟಿಐ): ಇಬ್ಬರು ಅಪರಿಚಿತ ವ್ಯಕ್ತಿಗಳು ಮಿರ್‌­ಪುರ್‌ ಪಟ್ಟಣ ಬಿಜೆಪಿ ಘಟಕದ ಉಪಾ­ಧ್ಯಕ್ಷ, ನಿವೃತ್ತ ಸೈನಿಕ ಓಂ ವೀರ್‌ ಸಿಂಗ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಬೆಳಿಗ್ಗೆ ವಾಯು ವಿಹಾರಕ್ಕೆ ಹೋದ ಸಂದರ್ಭ­ದಲ್ಲಿ ಅಲ್ಲಿಗೆ ಬಂದ ದುಷ್ಕರ್ಮಿ­ಗಳು ನಾಡ ಬಂದೂಕಿನಿಂದ ಸಿಂಗ್‌ ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೆ ಪ್ರತಿಯಾಗಿ ಸಿಂಗ್‌ ತಮ್ಮ ಬಳಿಯಿದ್ದ ರಿವಾಲ್ವರ್‌ನಿಂದ  ಗುಂಡು ಹಾರಿಸಿದಾಗ ಒಬ್ಬ ದುಷ್ಕರ್ಮಿ ಗಾಯ­ಗೊಂಡಿದ್ದಾನೆ. ಇಬ್ಬರೂ ಪರಾರಿಯಾಗಿ­ದ್ದಾರೆ ಎಂದು ಅವರು ಹೇಳಿದ್ದಾರೆ. ಹತ್ಯೆ ಖಂಡಿಸಿ ಸಿಂಗ್‌ ಸಂಬಂಧಿಕರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮತ್ತೊಂದು ಅತ್ಯಾಚಾರ, ಕೊಲೆ
ಲಖನೌ (ಐಎಎನ್‌ಎಸ್‌): ಅತ್ಯಾ­ಚಾರ, ಹತ್ಯೆ ಪ್ರಕರಣಗಳ ಸರದಿ ಉತ್ತರ ಪ್ರದೇಶ­­ದಲ್ಲಿ ಮುಂದುವರಿ­ದಿದೆ. ಬಿಜ್ನೂರ್‌ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ­ ಮಾಡ­ಲಾಗಿದೆ ಎಂದು ಪೊಲೀಸರು ಮಂಗಳ­ವಾರ ತಿಳಿಸಿದ್ದಾರೆ. ಸಬ್ದಲ್‌ಪುರ್‌ ರೆಹ್ರಾ ಗ್ರಾಮದಲ್ಲಿ ಸೋಮವಾರ ಈ ಪ್ರಕರಣ ನಡೆದಿದೆ. ಅತ್ಯಾಚಾರ ನಡೆಸಿದ ನಂತರ ದುಷ್ಕರ್ಮಿಗಳು ಬಾಲಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT