ಬೆಂಗಳೂರು: ರಾಜ್ಯದ ಶೇಖರ್ ನಾಯ್ಕ್ ನೇತೃತ್ವದ ಭಾರತ ಪುರುಷರ ಅಂಧರ ಕ್ರಿಕೆಟ್ ತಂಡ ಡಿಸೆಂಬರ್ 27ರಿಂದ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸೋಮವಾರ ದಕ್ಷಿಣ ಆಫ್ರಿಕಾಕ್ಕೆ ತೆರಳಿತು.
ಟೂರ್ನಿಯಲ್ಲಿ ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ, ದ. ಆಫ್ರಿಕಾ ತಂಡಗಳು ಭಾಗವಹಿಸಲಿವೆ. ಭಾರತದ ಆಟಗಾರರಿಗೆ ನವದೆಹಲಿಯಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್ ಭಾಗವಹಿಸಿದ್ದು, ಆಟಗಾರರಿಗೆ ಅಭಿನಂದಿಸಿ ₨10 ಲಕ್ಷ ನೀಡುವುದಾಗಿ ಭರವಸೆ ನೀಡಿದರು. ರಾಜ್ಯದ ಶೇಖರ್ ಜತೆಗೆ ಪ್ರಕಾಶ್ ಜಯರಾಮಯ್ಯ, ಚಿತ್ರದುರ್ಗದ ವೀರೇಶ್ ತಂಡದಲ್ಲಿದ್ದಾರೆ.