ನಮ್ಮ ದೇಶದಲ್ಲಿರುವ ತನ್ನ ಮೂವರು ಪತ್ರಕರ್ತರ ವೀಸಾ ವಿಸ್ತರಿಸಲು ನಿರಾಕರಿಸಿರುವುದಕ್ಕೆ ಚೀನಾವು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೆ ಇದಕ್ಕೆಲ್ಲ ಭಾರತ ಬಗ್ಗಬೇಕಾಗಿಲ್ಲ.
ಚೀನಾ ಗೂಢಚಾರಿಕೆಗೆ ಭಾರತದಲ್ಲಿ ಇರುವ ತನ್ನ ದೇಶದ ಪತ್ರಕರ್ತರನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನಾರ್ಹ. ಅದರಲ್ಲೂ ಟಿಬೆಟನ್ ಧರ್ಮಗುರು ದಲೈಲಾಮ ಅವರ ವಿರುದ್ಧ ಎತ್ತಿ ಕಟ್ಟಲು, ಬೈಲುಕುಪ್ಪೆಯಲ್ಲಿ ನೆಲೆಸಿರುವ ಟಿಬೆಟನ್ನರನ್ನು ಅಸ್ತ್ರವಾಗಿ ಮಾಡಿಕೊಳ್ಳ ಹೊರಟಿರುವುದು ನೋವಿನ ಸಂಗತಿ.
ಪತ್ರಕರ್ತರ ಮೂಲಕ ಭಾರತದಲ್ಲಿ ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು ಎಂದು ಚೀನಾ ಎಣಿಸಿದರೆ ಅದು ಮೂರ್ಖತನವಾದೀತು. ಇಂತಹ ಮನಸ್ಥಿಯಿಂದ ಆ ದೇಶ ಮೊದಲು ಹೊರಬರಲಿ.