ನವದೆಹಲಿ (ಪಿಟಿಐ): ಅಮೆರಿಕ ಮತ್ತು ಇಸ್ರೇಲ್ ಕಾನ್ಸುಲೇಟ್ ಕಚೇರಿ ಮೇಲೆ ದಾಳಿಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಮತ್ತು ಭಾರತಕ್ಕೆ ಬೇಕಾಗಿದ್ದ ಶ್ರೀಲಂಕಾ ಪ್ರಜೆ ಮೊಹಮ್ಮದ್ ಹುಸೇನ್ ಮೊಹಮ್ಮದ್ ಸುಲೇಮಾನ್ ಎಂಬುವನನ್ನು ಮಲೇಷ್ಯಾ ಸರ್ಕಾರ ಕೊಲಂಬೊಗೆ ಹಸ್ತಾಂತರಿಸಿದೆ.
ದಾಳಿ ಸಂಚು ರೂಪಿಸಿರುವ ಶ್ರೀಲಂಕಾ ಪ್ರಜೆಯನ್ನು ತನಗೆ ಒಪ್ಪಿಸುವಂತೆ ಭಾರತ ಮಲೇಷ್ಯಾಕ್ಕೆ ಮನವಿ ಮಾಡಿಕೊಂಡಿತ್ತು. ಈ ಮನವಿ ಧಿಕ್ಕರಿಸಿ ಮಲೇಷ್ಯಾ ಆತನನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪರಸ್ಪರ ಕಾನೂನು ಸಹಕಾರ ಒಪ್ಪಂದ ಸೇರಿದಂತೆ ಅನೇಕ ಒಪ್ಪಂದದ ಪ್ರಕಾರ ಸುಲೇಮಾನ್ನನ್ನು ತನಗೆ ಹಸ್ತಾಂತರಿಸುವಂತೆ ಭಾರತ ಪದೇಪದೇ ಮಾಡಿಕೊಂಡಿರುವ ಮನವಿಯನ್ನು ನಿರ್ಲಕ್ಷಿಸಿದ ಮಲೇಷ್ಯಾ ಕೊಲೆ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಆತನನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಿದೆ.