ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ ಸಂಚು ಆರೋಪಿ ಶ್ರೀಲಂಕಾಕ್ಕೆ ಹಸ್ತಾಂತರ

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಮೆರಿಕ ಮತ್ತು ಇಸ್ರೇಲ್ ಕಾನ್ಸು­ಲೇಟ್‌ ಕಚೇರಿ ಮೇಲೆ ದಾಳಿಗೆ ಸಂಚು ರೂಪಿ­ಸಿದ ಆರೋಪ ಹೊತ್ತಿ­ರುವ ಮತ್ತು ಭಾರತಕ್ಕೆ ಬೇಕಾಗಿದ್ದ ಶ್ರೀಲಂಕಾ ಪ್ರಜೆ ಮೊಹಮ್ಮದ್‌ ಹುಸೇನ್‌ ಮೊಹಮ್ಮದ್‌ ಸುಲೇಮಾನ್‌ ಎಂಬು­ವ­ನನ್ನು ಮಲೇಷ್ಯಾ ಸರ್ಕಾರ ಕೊಲಂಬೊಗೆ ಹಸ್ತಾಂತರಿಸಿದೆ.

ದಾಳಿ ಸಂಚು ರೂಪಿಸಿರುವ ಶ್ರೀಲಂಕಾ ಪ್ರಜೆಯನ್ನು ತನಗೆ ಒಪ್ಪಿಸುವಂತೆ ಭಾರತ ಮಲೇಷ್ಯಾಕ್ಕೆ ಮನವಿ ಮಾಡಿ­ಕೊಂಡಿತ್ತು. ಈ ಮನವಿ ಧಿಕ್ಕರಿಸಿ ಮಲೇಷ್ಯಾ ಆತನನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪರಸ್ಪರ ಕಾನೂನು ಸಹಕಾರ ಒಪ್ಪಂದ ಸೇರಿದಂತೆ ಅನೇಕ ಒಪ್ಪಂದದ ಪ್ರಕಾರ ಸುಲೇಮಾನ್‌ನನ್ನು ತನಗೆ ಹಸ್ತಾಂತ­ರಿಸು­ವಂತೆ ಭಾರತ ಪದೇಪದೇ ಮಾಡಿ­ಕೊಂಡಿರುವ ಮನವಿಯನ್ನು ನಿರ್ಲಕ್ಷಿಸಿದ ಮಲೇಷ್ಯಾ ಕೊಲೆ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಆತನನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT