ಬೆಂಗಳೂರು: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕನ್ನಡದ ಅಧ್ಯಯನ ಪೀಠ ಸ್ಥಾಪನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂ 43 ಲಕ್ಷ ಮಂಜೂರು ಮಾಡಿದೆ.
ಪೀಠ ಸ್ಥಾಪನೆಗೆ ರೂ4 ರಿಂದ 5 ಕೋಟಿ ನೀಡುವಂತೆ ವಿಶ್ವವಿದ್ಯಾಲಯ ಕೋರಿತ್ತು. ಆದರೆ, ಮೊದಲ ಹಂತವಾಗಿ ರೂ 50 ಲಕ್ಷ ಕೊಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಪ್ಪಿತ್ತು.
ಆದರೆ, ‘ಅಷ್ಟು ದೂರ ಹೋಗಿ ಕನ್ನಡದ ಅಧ್ಯಯನ ಯಾರು ಮಾಡುತ್ತಾರೆ? ಹಣ ಸುಮ್ಮನೆ ವ್ಯರ್ಥವಾಗುತ್ತದೆ’ ಎಂದು ಕಾರಣ ನೀಡಿ ಅನುದಾನ ಬಿಡುಗಡೆಗೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.