ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂ.1 ರಾಜ್ಯವಾಗಿ ಜಾರ್ಖಂಡ್‌: ಮೋದಿ ಭರವಸೆ

Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಜೆಮ್‌ಶೆಡ್‌ಪುರ (ಪಿಟಿಐ): ಬಿಜೆಪಿ­ಯನ್ನು ಅಧಿಕಾರಕ್ಕೆ ತಂದರೆ ಜಾರ್ಖಂಡ್‌ ಅನ್ನು ದೇಶದ­ಲ್ಲಿಯೇ ನಂಬರ್‌ ಒನ್‌ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸುವು­ದಾಗಿ  ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಜಾರ್ಖಂಡ್ ನೈಸರ್ಗಿಕ ಸಂಪತ್ತು ಹಾಗೂ ಗಣಿ ಲೂಟಿಗೆ  ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧ­ರಿ­ಸಿದ್ದು,  ಇದರಿಂದಾಗಿ ಮುಂದಿನ ಕೆಲವು ವರ್ಷ­ಗಳಲ್ಲಿ ರಾಜ್ಯದ ಖಜಾನೆಗೆ 20 ಸಾವಿರ ಕೊಟಿ ರೂಪಾಯಿ ಉಳಿತಾಯ­ವಾಗ­ಲಿದೆ ಎಂದು ತಿಳಿಸಿದರು.

ಸಂಪದ್ಭರಿ­ತ ರಾಜ್ಯದ ನೈಸರ್ಗಿಕ ಸಂಪ­ನ್ಮೂಲಗಳನ್ನು 14 ವರ್ಷಗಳಿಂದ ಕೊಳ್ಳೆ ಹೊಡೆದ  ರಾಜಕೀಯ ಪಕ್ಷಗಳಿಗೆ ಜನತೆ ಪಾಠ ಕಲಿಸಲು ವಿಧಾನಸಭಾ ಚುನಾ­ವಣೆ ಸರಿಯಾದ ಸಂದರ್ಭ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT