ಶೃಂಗೇರಿ ಬಳಿ ಎ.ಎನ್.ಎಫ್. ಗುಂಡೇಟಿಗೆ ಕಬೀರ್ ಎಂಬ ಕೂಲಿ ಕಾರ್ಮಿಕ ಬಲಿಯಾಗಿದ್ದಾನೆ. ಅಲ್ಲಿಯ ಚಿತ್ರಣವನ್ನು ಮಾಧ್ಯಮಗಳಲ್ಲಿ ಗಮನಿಸಿದರೆ ಇದೊಂದು ನಕಲಿ ಎನ್ಕೌಂಟರ್ ಎನಿಸುತ್ತದೆ.
ರಾಜ್ಯದಲ್ಲಿ ಜಾನುವಾರು ಸಾಗಾಣಿಕೆಗೆ ಇರುವ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಸರ್ಕಾರ ಅಥವಾ ಪೊಲೀಸ್ ಇಲಾಖೆ ಮಾಡಲಿ. ಅದು ಬಿಟ್ಟು, ಜಾನುವಾರು ಸಾಗಾಣಿಕೆ ದೊಡ್ಡ ಅಪರಾಧ ಎಂಬಂತೆ, ಅಲ್ಪಸಂಖ್ಯಾತ ಯುವಕರ ಮೇಲೆ ದೌರ್ಜನ್ಯ ನಡೆಸುವುದು, ಪ್ರಕರಣ ದಾಖಲಿಸುವುದು ಇನ್ನಾದರೂ ನಿಲ್ಲಲಿ.
ಶೃಂಗೇರಿ ನಕಲಿ ಎನ್ಕೌಂಟರ್ ಬಗ್ಗೆ ಸೂಕ್ತ ತನಿಖೆ ನಡೆಸಿ ಬಡ ಕುಟುಂಬಕ್ಕೆ ನೆರವು ನೀಡಲಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಲಿ.