<p><strong>ನವಲಗುಂದ:</strong> ಸನ್ಯಾಸಿಗಳಿಗೆ ಸನ್ಯಾಸ ಜೀವನ, ಗೃಹಸ್ಥರಿಗೆ ಗೃಹಸ್ಥ ಜೀವನ ಶ್ರೇಷ್ಠ ಎಂದು ಹೇಳಿದ ನಾಗಲಿಂಗಸ್ವಾಮಿಗಳು ಅವದೂತ ಶ್ರೇಷ್ಠರಲ್ಲಿ ಒಬ್ಬರಾಗಿದ್ದಾರೆ ಎಂದು ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಅನಂತರಾಮ ಅಭಿಪ್ರಾಯಪಟ್ಟರು.<br /> <br /> ನಾಗಲಿಂಗಸ್ವಾಮಿಗಳ 132ನೇ ಆರಾಧನಾ ಮಹೊತ್ಸವದ ಅಂಗವಾಗಿ ಇಲ್ಲಿ ಶನಿವಾರ ಏರ್ಪಡಿಸಿದ್ದ ನಾಗಲಿಂಗಾನಾಭವಗೋಷ್ಠಿಯಲ್ಲಿ ಅಜಾತ ನಾಗಲಿಂಗಸ್ವಾಮಿ ಚರಿತ್ರೆ ಎಂಬ ಕಿರು ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಪ್ರತಿವರ್ಷ ನಾಗಲಿಂಗಸ್ವಾಮಿಗಳ ಕುರಿತು ಒಂದು ಗ್ರಂಥ ಹೊರಬರಬೇಕೆಂಬ ಈಗಿನ ವೀರಯ್ಯಸ್ವಾಮಿಗಳ ಸಂಕಲ್ಪದಂತೆ ಜನಸಾಮಾನ್ಯರಿಗೆ ಅರ್ಥವಾಗುವಂತೆ 120 ಪುಟಗಳ ಸಣ್ಣ ಗ್ರಂಥವನ್ನು ರಚಿಸಲಾಗಿದೆ. ನಾಗಲಿಂಗ ಸ್ವಾಮಿಗಳ ಜೀವನ ಮೌಲ್ಯಗಳನ್ನೇ ನಿದರ್ಶನವನ್ನಾಗಿಟ್ಟುಕೊಂಡು ಹಗಲಿರುಳು ಶ್ರಮಪಟ್ಟು ರಚಿಸಿರುವ ಈ ಗ್ರಂಥವನ್ನು ಎಲ್ಲರೂ ಓದಿ ಅವರ ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು' ಎಂದು ಅವರು ಹೇಳಿದರು.<br /> <br /> ನರಗುಂದ ಪತ್ರಿವನ ಮಠದ ಬಸಯ್ಯಸ್ವಾಮೀಜಿ ಸಾನಿಧ್ಯ ವಹಿಸಿ ಅವಧೂತರೆಂದರೆ ನಿರಾಭಾರತ್ವ ಹೊಂದಿದವರು, ದೇಹದ ಮೇಲೆ ವ್ಯಾಮೋಹ ಹೊಂದದೇ ಸಂಪೂರ್ಣ ಮೈಮರೆತು ನಾಡಿನ ಒಳಿತಿಗಾಗಿ, ಧರ್ಮ, ಜಾತಿ, ಮತ, ಪಂಥ ಎನ್ನದೇ ಶ್ರಮಿಸುವವರು ಎಂದು ಹೇಳಿದರು.<br /> <br /> ಶ್ರೀ ಮಠದ ಪೀಠಾಧೀಶರಾದ ವೀರೇಂದ್ರಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಲ್ಲಿಕಾರ್ಜುನ ಪವಾಡಶೆಟ್ಟರ ಸ್ವಾಗತಿಸಿದರು. ಲಿಂಗರಾಜ ಕಮತ ನಿರೂಪಿಸಿದರು. ಶ್ರೀಕಾಂತ ಪಾಟೀಲ ವಂದಿಸಿದರು.<br /> <br /> <strong>ಸ್ವಯಂ ಉದ್ಯೋಗ ತರಬೇತಿ</strong><br /> ಕಲಘಟಗಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ 2013-14ನೇ ಸಾಲಿನ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸ್ವಯಂ ಉದ್ಯೋಗ ಕಾರ್ಯಕ್ರಮ ಹಾಗೂ ಕೌಶಲ್ಯ ತರಬೇತಿ ಘಟಕದಡಿ 18 ರಿಂದ 35 ವಯೋಮಾನದವರಿಂದ ಸ್ವಯಂ ಉದ್ಯೋಗ ಹಾಗೂ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.<br /> <br /> ಪಟ್ಟಣ ಪಂಚಾಯ್ತಿಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಸಂಬಂಧಪಟ್ಟ ದಾಖಲೆಗಳ ಜೊತೆ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯ್ತಿ ಕಲಘಟಗಿ ಇಲ್ಲಿಗೆ ಇದೇ 31ರ ಒಳಗಾಗಿ ಸಲ್ಲಿಸಬೇಕು.<br /> <br /> ಮಾಹಿತಿಗೆ ಪಟ್ಟಣ ಪಂಚಾಯ್ತಿ ಸೂಚನಾ ಫಲಕ ನೋಡಬಹುದಾಗಿದೆ ಅಥವಾ ವೆಬ್ಸೈಟ್ ಸಂದರ್ಶಿಸಬಹುದಾಗಿದೆ ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> <strong>ಎಸ್.ಡಿ.ಎಂ. ಡಾಕ್ಟರ್ 16ಕ್ಕೆ</strong><br /> ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನ ಔಷಧ ಗುಣಶಾಸ್ತ್ರ ವಿಭಾಗದ ಪಶುವೈದ್ಯಾಧಿಕಾರಿ ಡಾ.ಶರಣಬಸಪ್ಪ ರೋಣ ಅವರು ಇದೇ 16ರಂದು ಸಂಜೆ 6.50ರಿಂದ 7.20ರವರೆಗೆ `ಪ್ರಾಣಿ ಜನ್ಯಕಾಯಿಲೆಗಳು' ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ಪ್ರಶ್ನೆಗಳನ್ನು 08362443 414, 2443 415, 2443 416 ಸಂಖ್ಯೆಗಳಿಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಬಹುದು.<br /> <br /> <strong>ಉಪನ್ಯಾಸ ಇಂದು</strong><br /> ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಇದೇ 14ರಂದು ಸಂಜೆ 4ಕ್ಕೆ `ಭಾರತದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಮಾನಹಾನಿ ಮೊಕದ್ದಮೆ' ಕುರಿತು ಸರ್ಕಾರಿ ಸಹಾಯಕ ವಕೀಲ ಮಹೇಶ ವೈದ್ಯ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಲಗುಂದ:</strong> ಸನ್ಯಾಸಿಗಳಿಗೆ ಸನ್ಯಾಸ ಜೀವನ, ಗೃಹಸ್ಥರಿಗೆ ಗೃಹಸ್ಥ ಜೀವನ ಶ್ರೇಷ್ಠ ಎಂದು ಹೇಳಿದ ನಾಗಲಿಂಗಸ್ವಾಮಿಗಳು ಅವದೂತ ಶ್ರೇಷ್ಠರಲ್ಲಿ ಒಬ್ಬರಾಗಿದ್ದಾರೆ ಎಂದು ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಅನಂತರಾಮ ಅಭಿಪ್ರಾಯಪಟ್ಟರು.<br /> <br /> ನಾಗಲಿಂಗಸ್ವಾಮಿಗಳ 132ನೇ ಆರಾಧನಾ ಮಹೊತ್ಸವದ ಅಂಗವಾಗಿ ಇಲ್ಲಿ ಶನಿವಾರ ಏರ್ಪಡಿಸಿದ್ದ ನಾಗಲಿಂಗಾನಾಭವಗೋಷ್ಠಿಯಲ್ಲಿ ಅಜಾತ ನಾಗಲಿಂಗಸ್ವಾಮಿ ಚರಿತ್ರೆ ಎಂಬ ಕಿರು ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಪ್ರತಿವರ್ಷ ನಾಗಲಿಂಗಸ್ವಾಮಿಗಳ ಕುರಿತು ಒಂದು ಗ್ರಂಥ ಹೊರಬರಬೇಕೆಂಬ ಈಗಿನ ವೀರಯ್ಯಸ್ವಾಮಿಗಳ ಸಂಕಲ್ಪದಂತೆ ಜನಸಾಮಾನ್ಯರಿಗೆ ಅರ್ಥವಾಗುವಂತೆ 120 ಪುಟಗಳ ಸಣ್ಣ ಗ್ರಂಥವನ್ನು ರಚಿಸಲಾಗಿದೆ. ನಾಗಲಿಂಗ ಸ್ವಾಮಿಗಳ ಜೀವನ ಮೌಲ್ಯಗಳನ್ನೇ ನಿದರ್ಶನವನ್ನಾಗಿಟ್ಟುಕೊಂಡು ಹಗಲಿರುಳು ಶ್ರಮಪಟ್ಟು ರಚಿಸಿರುವ ಈ ಗ್ರಂಥವನ್ನು ಎಲ್ಲರೂ ಓದಿ ಅವರ ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು' ಎಂದು ಅವರು ಹೇಳಿದರು.<br /> <br /> ನರಗುಂದ ಪತ್ರಿವನ ಮಠದ ಬಸಯ್ಯಸ್ವಾಮೀಜಿ ಸಾನಿಧ್ಯ ವಹಿಸಿ ಅವಧೂತರೆಂದರೆ ನಿರಾಭಾರತ್ವ ಹೊಂದಿದವರು, ದೇಹದ ಮೇಲೆ ವ್ಯಾಮೋಹ ಹೊಂದದೇ ಸಂಪೂರ್ಣ ಮೈಮರೆತು ನಾಡಿನ ಒಳಿತಿಗಾಗಿ, ಧರ್ಮ, ಜಾತಿ, ಮತ, ಪಂಥ ಎನ್ನದೇ ಶ್ರಮಿಸುವವರು ಎಂದು ಹೇಳಿದರು.<br /> <br /> ಶ್ರೀ ಮಠದ ಪೀಠಾಧೀಶರಾದ ವೀರೇಂದ್ರಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಲ್ಲಿಕಾರ್ಜುನ ಪವಾಡಶೆಟ್ಟರ ಸ್ವಾಗತಿಸಿದರು. ಲಿಂಗರಾಜ ಕಮತ ನಿರೂಪಿಸಿದರು. ಶ್ರೀಕಾಂತ ಪಾಟೀಲ ವಂದಿಸಿದರು.<br /> <br /> <strong>ಸ್ವಯಂ ಉದ್ಯೋಗ ತರಬೇತಿ</strong><br /> ಕಲಘಟಗಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ 2013-14ನೇ ಸಾಲಿನ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸ್ವಯಂ ಉದ್ಯೋಗ ಕಾರ್ಯಕ್ರಮ ಹಾಗೂ ಕೌಶಲ್ಯ ತರಬೇತಿ ಘಟಕದಡಿ 18 ರಿಂದ 35 ವಯೋಮಾನದವರಿಂದ ಸ್ವಯಂ ಉದ್ಯೋಗ ಹಾಗೂ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.<br /> <br /> ಪಟ್ಟಣ ಪಂಚಾಯ್ತಿಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಸಂಬಂಧಪಟ್ಟ ದಾಖಲೆಗಳ ಜೊತೆ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯ್ತಿ ಕಲಘಟಗಿ ಇಲ್ಲಿಗೆ ಇದೇ 31ರ ಒಳಗಾಗಿ ಸಲ್ಲಿಸಬೇಕು.<br /> <br /> ಮಾಹಿತಿಗೆ ಪಟ್ಟಣ ಪಂಚಾಯ್ತಿ ಸೂಚನಾ ಫಲಕ ನೋಡಬಹುದಾಗಿದೆ ಅಥವಾ ವೆಬ್ಸೈಟ್ ಸಂದರ್ಶಿಸಬಹುದಾಗಿದೆ ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> <strong>ಎಸ್.ಡಿ.ಎಂ. ಡಾಕ್ಟರ್ 16ಕ್ಕೆ</strong><br /> ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನ ಔಷಧ ಗುಣಶಾಸ್ತ್ರ ವಿಭಾಗದ ಪಶುವೈದ್ಯಾಧಿಕಾರಿ ಡಾ.ಶರಣಬಸಪ್ಪ ರೋಣ ಅವರು ಇದೇ 16ರಂದು ಸಂಜೆ 6.50ರಿಂದ 7.20ರವರೆಗೆ `ಪ್ರಾಣಿ ಜನ್ಯಕಾಯಿಲೆಗಳು' ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ಪ್ರಶ್ನೆಗಳನ್ನು 08362443 414, 2443 415, 2443 416 ಸಂಖ್ಯೆಗಳಿಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಬಹುದು.<br /> <br /> <strong>ಉಪನ್ಯಾಸ ಇಂದು</strong><br /> ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಇದೇ 14ರಂದು ಸಂಜೆ 4ಕ್ಕೆ `ಭಾರತದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಮಾನಹಾನಿ ಮೊಕದ್ದಮೆ' ಕುರಿತು ಸರ್ಕಾರಿ ಸಹಾಯಕ ವಕೀಲ ಮಹೇಶ ವೈದ್ಯ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>