<p><strong>ಧಾರವಾಡ:</strong> `ಬೇರೆ ಭಾಷೆಯ ನಾಟಕ ಅಥವಾ ಇತರೆ ಸಾಹಿತ್ಯ ಕೃತಿಗಳನ್ನು ಅನುವಾದ ಮಾಡುವ ಸಂದರ್ಭದಲ್ಲಿ ಯಥಾವತ್ ಅನುವಾದ ಮಾಡದೇ, ಇಲ್ಲಿಯ ಭಾಷೆಯ ಸೊಗಡನ್ನೂ ಸೇರಿಸಬೇಕು. ಅಂತಹ ಸ್ವಾತಂತ್ರ್ಯವನ್ನು ಅನುವಾದಕರು ಬಳಸಿಕೊಳ್ಳಬೇಕು' ಎಂದು ಹಿರಿಯ ನಾಟಕಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸಲಹೆ ನೀಡಿದರು.<br /> <br /> ರಂಗಪರಿಸರ, ಸಿರವರ ಪ್ರಕಾಶನದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಡಿ.ಎಸ್.ಚೌಗಲೆ ಅವರ ಏಳು ನಾಟಕಗಳಾದ ದಿಶಾಂತರ, ಕಸ್ತೂರ ಬಾ, ಉಚಲ್ಯಾ, ಗಾಂಧಿ ವಿರುದ್ಧ ಗಾಂಧಿ, ಪೇಯಿಂಗ್ ಗೆಸ್ಟ್, ಗಾಂಧಿ ಅಂಬೇಡ್ಕರ್ ಹಾಗೂ ಕಿರುವಂತ್ ನಾಟಕಗಳ ಸಂಪುಟವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> `ಬಸವಪ್ಪಶಾಸ್ತ್ರಿಗಳು ಅನುವಾದ ಮಾಡಿದ ಶಾಕುಂತಲ ಮೂಲ ಕಾಳಿದಾಸನದಾದರೂ ಅನುವಾದದಲ್ಲಿ ಬಳಸಿದ ಅದ್ಭುತ ಭಾಷೆಯಿಂದಾಗಿ ಅದು ಬಸವಪ್ಪಶಾಸ್ತ್ರಿಗಳದೇ ನಾಟಕವೆನಿಸುತ್ತದೆ. ಬೇರೆ ಭಾಷೆಗೆ ಅನುವಾದ ಮಾಡುವುದು ಎಂದರೆ ಆ ಭಾಷೆಗೆ ತಕ್ಕಂತೆ ಹೊಂದಿಸುವುದೇ ಆಗಿದೆ' ಎಂದರು.<br /> <br /> `ರಾಜಕೀಯ ನಾಯಕರು ಕನ್ನಡ-ಮರಾಠಿ ಭಾಷೆಗೆ ಸಂಬಂಧಿಸಿದಂತೆ ಜಗಳ ಆಡುತ್ತಿರುವ ಹೊತ್ತಿನಲ್ಲಿ ಚೌಗಲೆ ಅವರು ಮರಾಠಿ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಭಾಷಾ ಬಾಂಧವ್ಯವನ್ನು ಬೆಳೆಸುತ್ತಿದ್ದಾರೆ' ಎಂದು ಶ್ಲಾಘಿಸಿದರು.<br /> <br /> ಡಾ.ಡಿ.ಎಸ್.ಚೌಗಲೆ ಮಾತನಾಡಿ, `ಮರಾಠಿ ಭಾಷೆ, ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಕ್ಷೇತ್ರಗಳು ಜೀವಂತವಾಗಿರಲು ಕಾರಣ ಮರಾಠಿ ಅಸ್ಮಿತೆ ಎಂಬುದನ್ನು ನನ್ನ ಗುರುಗಳಾದ ಡಾ.ಎಂ.ಎಂ.ಕಲಬುರ್ಗಿ ಹೇಳುತ್ತಾರೆ' ಎಂದು ನುಡಿದರು.<br /> <br /> `ಶಿವಾಜಿ ಎಂಬ ಅಸ್ಮಿತೆ ಇಡೀ ಮರಾಠಿ ಜನತೆಗೆ ಜೀವಂತಿಕೆಯಂತೆ ಕಾಣುತ್ತಿದೆ. ಆದರೆ ನಮ್ಮಲ್ಲಿ ಅಂತಹ ಅಸ್ಮಿತೆಯ ಕೊರತೆ ಇದ್ದು, ಬರೀ ಕಂದರಗಳೇ ತುಂಬಿವೆ' ಎಂದು ವಿಷಾದಿಸಿದರು.<br /> <br /> ಡಾ.ಶಶಿಧರ ನರೇಂದ್ರ ಕೃತಿ ಪರಿಚಯ ಮಾಡಿದರು. ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> `ಬೇರೆ ಭಾಷೆಯ ನಾಟಕ ಅಥವಾ ಇತರೆ ಸಾಹಿತ್ಯ ಕೃತಿಗಳನ್ನು ಅನುವಾದ ಮಾಡುವ ಸಂದರ್ಭದಲ್ಲಿ ಯಥಾವತ್ ಅನುವಾದ ಮಾಡದೇ, ಇಲ್ಲಿಯ ಭಾಷೆಯ ಸೊಗಡನ್ನೂ ಸೇರಿಸಬೇಕು. ಅಂತಹ ಸ್ವಾತಂತ್ರ್ಯವನ್ನು ಅನುವಾದಕರು ಬಳಸಿಕೊಳ್ಳಬೇಕು' ಎಂದು ಹಿರಿಯ ನಾಟಕಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸಲಹೆ ನೀಡಿದರು.<br /> <br /> ರಂಗಪರಿಸರ, ಸಿರವರ ಪ್ರಕಾಶನದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಡಿ.ಎಸ್.ಚೌಗಲೆ ಅವರ ಏಳು ನಾಟಕಗಳಾದ ದಿಶಾಂತರ, ಕಸ್ತೂರ ಬಾ, ಉಚಲ್ಯಾ, ಗಾಂಧಿ ವಿರುದ್ಧ ಗಾಂಧಿ, ಪೇಯಿಂಗ್ ಗೆಸ್ಟ್, ಗಾಂಧಿ ಅಂಬೇಡ್ಕರ್ ಹಾಗೂ ಕಿರುವಂತ್ ನಾಟಕಗಳ ಸಂಪುಟವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> `ಬಸವಪ್ಪಶಾಸ್ತ್ರಿಗಳು ಅನುವಾದ ಮಾಡಿದ ಶಾಕುಂತಲ ಮೂಲ ಕಾಳಿದಾಸನದಾದರೂ ಅನುವಾದದಲ್ಲಿ ಬಳಸಿದ ಅದ್ಭುತ ಭಾಷೆಯಿಂದಾಗಿ ಅದು ಬಸವಪ್ಪಶಾಸ್ತ್ರಿಗಳದೇ ನಾಟಕವೆನಿಸುತ್ತದೆ. ಬೇರೆ ಭಾಷೆಗೆ ಅನುವಾದ ಮಾಡುವುದು ಎಂದರೆ ಆ ಭಾಷೆಗೆ ತಕ್ಕಂತೆ ಹೊಂದಿಸುವುದೇ ಆಗಿದೆ' ಎಂದರು.<br /> <br /> `ರಾಜಕೀಯ ನಾಯಕರು ಕನ್ನಡ-ಮರಾಠಿ ಭಾಷೆಗೆ ಸಂಬಂಧಿಸಿದಂತೆ ಜಗಳ ಆಡುತ್ತಿರುವ ಹೊತ್ತಿನಲ್ಲಿ ಚೌಗಲೆ ಅವರು ಮರಾಠಿ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಭಾಷಾ ಬಾಂಧವ್ಯವನ್ನು ಬೆಳೆಸುತ್ತಿದ್ದಾರೆ' ಎಂದು ಶ್ಲಾಘಿಸಿದರು.<br /> <br /> ಡಾ.ಡಿ.ಎಸ್.ಚೌಗಲೆ ಮಾತನಾಡಿ, `ಮರಾಠಿ ಭಾಷೆ, ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಕ್ಷೇತ್ರಗಳು ಜೀವಂತವಾಗಿರಲು ಕಾರಣ ಮರಾಠಿ ಅಸ್ಮಿತೆ ಎಂಬುದನ್ನು ನನ್ನ ಗುರುಗಳಾದ ಡಾ.ಎಂ.ಎಂ.ಕಲಬುರ್ಗಿ ಹೇಳುತ್ತಾರೆ' ಎಂದು ನುಡಿದರು.<br /> <br /> `ಶಿವಾಜಿ ಎಂಬ ಅಸ್ಮಿತೆ ಇಡೀ ಮರಾಠಿ ಜನತೆಗೆ ಜೀವಂತಿಕೆಯಂತೆ ಕಾಣುತ್ತಿದೆ. ಆದರೆ ನಮ್ಮಲ್ಲಿ ಅಂತಹ ಅಸ್ಮಿತೆಯ ಕೊರತೆ ಇದ್ದು, ಬರೀ ಕಂದರಗಳೇ ತುಂಬಿವೆ' ಎಂದು ವಿಷಾದಿಸಿದರು.<br /> <br /> ಡಾ.ಶಶಿಧರ ನರೇಂದ್ರ ಕೃತಿ ಪರಿಚಯ ಮಾಡಿದರು. ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>