<p><strong>ನವದೆಹಲಿ:</strong> ಜವಹರಲಾಲ್ ನೆಹರೂ ಅವರು ದೇಶದ ಪ್ರಧಾನಿಯಾಗಿದ್ದ ಕಾಲಘಟ್ಟದಲ್ಲಿ ಸುಮಾರು 20 ವರ್ಷಗಳ ಕಾಲ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಕುಟುಂಬದ ಮೇಲೆ ನಿರಂತರ ಗೂಢಚರ್ಯೆ ನಡೆಸಿದ್ದರು ಎಂದು ಶುಕ್ರವಾರ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿ ಈಗ ವಿವಾದಕ್ಕೆ ಕಾರಣವಾಗಿದೆ.<br /> <br /> ನೆಹರೂ ಅವರು ಪ್ರಧಾನಿಯಾಗಿದ್ದಾಗ, ಅವರ ಅಧೀನದಲ್ಲಿದ್ದ ಎರಡು ಅವರ್ಗೀಕೃತ ಗುಪ್ತಚರ ಸಂಸ್ಥೆಗಳನ್ನು ಬಳಸಿಕೊಂಡು ಸುಮಾರು ಎರಡು ದಶಕಗಳ ಕಾಲ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಲಾಯಿತು. ಈ ಸಂಸ್ಥೆಗಳು ಬೋಸ್ ಅವರ ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಚಲನವಲನಗಳ ಮೇಲೆ, ವ್ಯವಹಾರಗಳ ಮೇಲೆ ನಿಗಾವಹಿಸಿದ್ದರು. ಪತ್ರ ವ್ಯವಹಾರಗಳ ಮೇಲೂ ಕಣ್ಣಿಟ್ಟಿದ್ದರು. ಅದರಲ್ಲೂ ನೇತಾಜಿ ಅವರಿಗೆ ಸೇರಿದ ವುಡ್ಬರ್ನ್ ಪಾರ್ಕ್ ಮತ್ತು 38/2 ಎಲ್ಗಿನ್ ರಸ್ತೆಯಲ್ಲಿದ್ದ ಮನೆಗಳು ಗುಪ್ತಚರ ಸಂಸ್ಥೆಗಳ ನಿರಂತರ ನಿಗಾ ವ್ಯವಸ್ಥೆಯಲ್ಲಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿದೆ. <br /> <br /> ನೇತಾಜಿ ಅವರ ನೆರೆಹೊರೆಯ ಕುಟುಂಬಗಳಾದ ಸಿಸಿರ್ ಕುಮಾರ್ ಬೋಸ್ ಮತ್ತು ಅಮಿಯಾ ನಾಥ್ ಬೋಸ್ ಅವರ ಕುಟುಂಬದ ಮೇಲೂ ಗೂಢಚರ್ಯೆ ನಡೆಸಲಾಗಿತ್ತು. ಯಾಕೆಂದರೆ ಈ ಕುಟುಂಬಗಳು ನೇತಾಜಿ ಅವರ ಕುಟುಂಬದ ಜತೆ ಆತ್ಮೀಯ ಸಂಬಂಧ ಹೊಂದಿದ್ದವು ಎಂದೂ ವರದಿಯಲ್ಲಿ ಹೇಳಲಾಗಿದೆ.<br /> <br /> ನೇತಾಜಿ ಕುಟುಂಬಕ್ಕೆ ಸೇರಿದ, ಸದ್ಯ ಕೋಲ್ಕತ್ತಾದಲ್ಲಿ ಉದ್ಯಮಿಯಾಗಿರುವ ಚಂದ್ರಕುಮಾರ್ ಬೋಸ್, ಈ ವರದಿಗೆ ಪ್ರತಿಕ್ರಿಯಿಸಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಮೇಲೆ ಸರ್ಕಾರ ಗೂಢಚರ್ಯೆ ನಡೆಸಲು ಅವರೊಬ್ಬ ಅಪರಾಧಿ ಆಗಿರಲಿಲ್ಲ. ಅವರೊಬ್ಬರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ತಮ್ಮ ದೇಶಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿದವರು ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜವಹರಲಾಲ್ ನೆಹರೂ ಅವರು ದೇಶದ ಪ್ರಧಾನಿಯಾಗಿದ್ದ ಕಾಲಘಟ್ಟದಲ್ಲಿ ಸುಮಾರು 20 ವರ್ಷಗಳ ಕಾಲ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಕುಟುಂಬದ ಮೇಲೆ ನಿರಂತರ ಗೂಢಚರ್ಯೆ ನಡೆಸಿದ್ದರು ಎಂದು ಶುಕ್ರವಾರ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿ ಈಗ ವಿವಾದಕ್ಕೆ ಕಾರಣವಾಗಿದೆ.<br /> <br /> ನೆಹರೂ ಅವರು ಪ್ರಧಾನಿಯಾಗಿದ್ದಾಗ, ಅವರ ಅಧೀನದಲ್ಲಿದ್ದ ಎರಡು ಅವರ್ಗೀಕೃತ ಗುಪ್ತಚರ ಸಂಸ್ಥೆಗಳನ್ನು ಬಳಸಿಕೊಂಡು ಸುಮಾರು ಎರಡು ದಶಕಗಳ ಕಾಲ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಲಾಯಿತು. ಈ ಸಂಸ್ಥೆಗಳು ಬೋಸ್ ಅವರ ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಚಲನವಲನಗಳ ಮೇಲೆ, ವ್ಯವಹಾರಗಳ ಮೇಲೆ ನಿಗಾವಹಿಸಿದ್ದರು. ಪತ್ರ ವ್ಯವಹಾರಗಳ ಮೇಲೂ ಕಣ್ಣಿಟ್ಟಿದ್ದರು. ಅದರಲ್ಲೂ ನೇತಾಜಿ ಅವರಿಗೆ ಸೇರಿದ ವುಡ್ಬರ್ನ್ ಪಾರ್ಕ್ ಮತ್ತು 38/2 ಎಲ್ಗಿನ್ ರಸ್ತೆಯಲ್ಲಿದ್ದ ಮನೆಗಳು ಗುಪ್ತಚರ ಸಂಸ್ಥೆಗಳ ನಿರಂತರ ನಿಗಾ ವ್ಯವಸ್ಥೆಯಲ್ಲಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿದೆ. <br /> <br /> ನೇತಾಜಿ ಅವರ ನೆರೆಹೊರೆಯ ಕುಟುಂಬಗಳಾದ ಸಿಸಿರ್ ಕುಮಾರ್ ಬೋಸ್ ಮತ್ತು ಅಮಿಯಾ ನಾಥ್ ಬೋಸ್ ಅವರ ಕುಟುಂಬದ ಮೇಲೂ ಗೂಢಚರ್ಯೆ ನಡೆಸಲಾಗಿತ್ತು. ಯಾಕೆಂದರೆ ಈ ಕುಟುಂಬಗಳು ನೇತಾಜಿ ಅವರ ಕುಟುಂಬದ ಜತೆ ಆತ್ಮೀಯ ಸಂಬಂಧ ಹೊಂದಿದ್ದವು ಎಂದೂ ವರದಿಯಲ್ಲಿ ಹೇಳಲಾಗಿದೆ.<br /> <br /> ನೇತಾಜಿ ಕುಟುಂಬಕ್ಕೆ ಸೇರಿದ, ಸದ್ಯ ಕೋಲ್ಕತ್ತಾದಲ್ಲಿ ಉದ್ಯಮಿಯಾಗಿರುವ ಚಂದ್ರಕುಮಾರ್ ಬೋಸ್, ಈ ವರದಿಗೆ ಪ್ರತಿಕ್ರಿಯಿಸಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಮೇಲೆ ಸರ್ಕಾರ ಗೂಢಚರ್ಯೆ ನಡೆಸಲು ಅವರೊಬ್ಬ ಅಪರಾಧಿ ಆಗಿರಲಿಲ್ಲ. ಅವರೊಬ್ಬರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ತಮ್ಮ ದೇಶಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿದವರು ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>