ಅಲ್ಲದೇ, ಕುಂಭದ್ರೋಣ ಮಳೆಗೆ ಸಾಕಷ್ಟು ಮನೆಗಳು ನೆಲಸಮವಾಗಿವೆ.
ರಾಜಧಾನಿ ನಗರ ಕಠ್ಮಂಡುವಿನಿಂದ 250 ಕಿ.ಮೀ ದೂರದಲ್ಲಿರುವ ಕಸ್ಕಿ ಜಿಲ್ಲೆಯಲ್ಲಿ ಭೀಕರ ಪ್ರವಾಹದಿಂದ ಮನೆಗಳು ಕುಸಿದಿದ್ದು, 19 ಜನರು ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.
ವಿವಿಧ ಅವಘಡಗಳಲ್ಲಿ 11 ಮಹಿಳೆಯರು ಹಾಗೂ 8 ಜನ ಪುರುಷರು ಮೃತಪಟ್ಟಿದ್ದಾರೆ. ಇದಲ್ಲದೆ, 14 ಜನರು ಕಾಣೆಯಾಗಿದ್ದಾರೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.
ಭೂಕುಸಿತದಿಂದಾಗಿ ಪೊಖರಾ–ಬಂಗ್ಲಂಗ್ ಹೆದ್ದಾರಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.