ಬೆಂಗಳೂರು (ಪಿಟಿಐ): ನೇಪಾಳದಲ್ಲಿ ಶನಿವಾರ ಸಂಭವಿಸಿದ ಭೀಕರ ಭೂಕಂಪನದಲ್ಲಿ ಸಿಲುಕಿದ್ದ ಕರ್ನಾಟಕ ಜನರನ್ನು ವಿವಿಧ ತಂಡಗಳನ್ನಾಗಿ ಮಾಡಿ ರಸ್ತೆ, ವಿಶೇಷ ವಿಮಾನದ ಮೂಲಕ ಭಾರತಕ್ಕೆ ವಾಪಸ್ ಕರೆತರಲಾಗಿದೆ ಎಂದು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತಿಳಿಸಿದ್ದಾರೆ.
82 ಮಂದಿಯ ತಂಡವು ಭಾರತೀಯ ವಾಯುಪಡೆಯ ವಿಮಾನದ ಮೂಲಕ ದೆಹಲಿಯಿಂದ ಕರ್ನಾಟಕಕ್ಕೆ ಬಂದು ತಲುಪಿದ್ದಾರೆ ಎಂದು ಅಧಿಕಾರಿ ತಿಳಿಸಿದರು. ನೇಪಾಳದಿಂದ ನೇರವಾಗಿ ದೆಹಲಿಯ ಕರ್ನಾಟಕ ಭವನಕ್ಕೆ ಕರೆತರಲಾಯಿತು.
ಮಂಡ್ಯ ಜಿಲ್ಲೆಯ ಹರಳಹಳ್ಳಿ 35ಮಂದಿ ಗೋರಖಪುರಕ್ಕೆ ಬಂದು ತಲುಪಿದ್ದು, ಬೆಳಗಾವಿಯ 30 ಮಂದಿ ಭಾರತದ ಗಡಿಗೆ ಬಂದು ತಲುಪಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ನೇಪಾಳದ ಪೋಖ್ರಾಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ 9 ಮಂದಿಯ ಪ್ರವಾಸಿಗರ ಗುಂಪು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.
ಉತ್ತರ ವಲಯ ಐಜಿಪಿ ಉಮೇಶ್ಕುಮಾರ್ ಹಾಗೂ ಹಿರಿಯ ಐಎಎಸ್ ಅಧಿಕಾರಿ ಪಂಕಜ್ಕುಮಾರ್ ಪಾಂಡೆ ಅವರನ್ನು ನೇಪಾಳದಲ್ಲಿ ಭೂಕಂಪನದಲ್ಲಿ ಸಿಲುಕಿದ ಜನರ ರಕ್ಷಣಾ ಕಾರ್ಯಕ್ಕೆ ಕರ್ನಾಟಕ ಸರ್ಕಾರವು ಶನಿವಾರ ನಿಯೋಜಿಸಿತ್ತು.