ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸಂಘಟನೆಗೆ ಒತ್ತು: ಕೇಜ್ರಿವಾಲ್‌

Last Updated 7 ಜೂನ್ 2014, 9:44 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಎಪಿ ಪಕ್ಷದೊಳಗಿನ ಅಂತಃಕಲಹ ಸರಿಪಡಿಸಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವುದಾಗಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

  ಯೋಗೇಂದ್ರ ಯಾದವ್‌ ನನ್ನ ಆತ್ಮೀಯ ಗೆಳೆಯ ಹಾಗೂ ಮೌಲ್ಯಯುತ ಸಹದ್ಯೋಗಿ ಎಂದು ಸಾಮಾಜಿಕ ಜಾಲತಾಣದಲ್ಲಿ  ಕೇಜ್ರಿವಾಲ್‌ ಟ್ವಿಟ್‌ ಮಾಡಿದ್ದಾರೆ.

ನಾನಾ ಕಾರಣಗಳಿಗೆ ಪಕ್ಷದಿಂದ ಹೊರ ಹೋಗಿರುವ ಶಾಜಿಯ ಇಲ್ಮಿ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಕೇಜ್ರಿವಾಲ್‌ ಟ್ವಿಟ್‌ ಮಾಡಿದ್ದಾರೆ.

ಇಂದು ನಡೆಯುತ್ತಿರುವ ಪಕ್ಷದ ಸಭೆಯಲ್ಲಿ ಯೋಗೇಂದ್ರ ಯಾದವ್‌, ಮನೀಷ್‌ ಸಿಸೋಡಿಯಾ, ಅರವಿಂದ್‌ ಕೇಜ್ರಿವಾಲ್‌ ಭಾಗವಹಿಸಿದ್ದಾರೆ.

ಕೇಜ್ರಿವಾಲ್‌ ಆಪ್ತರಾಗಿರುವ ಸಿಸೋಡಿಯಾ ಮತ್ತು ಯಾದವ್‌ ಅವರ ನಡುವೆ ಪತ್ರ ಸಮರ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT