ಪಿಎಚ್.ಡಿ ಪದವಿ
ಆರ್.ಟಿ.ನಗರದ ಟಿ.ಪಿ.ಚೇತನ್ ಅವರು ಪ್ರಾಧ್ಯಾಪಕ ಎಸ್.ಎ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ವಿಷಯ ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
ಅರ್ಜಿ ಆಹ್ವಾನ
ರಾಜಾಜಿನಗರದ ಹೈದ್ರಾಬಾದ್ ಕರ್ನಾಟಕ ನಿವಾಸಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘವು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 80 ಅಂಕ ಪಡೆದ ನಗರದಲ್ಲಿ ವಾಸವಾಗಿರುವ ಹೈದ್ರಾಬಾದ್ ನಿವಾಸಿಗಳ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ. ಜುಲೈ 15 ರ ಒಳಗೆ ಅರ್ಜಿ ಸಲ್ಲಿಸಬೇಕು.
ಸಂಪರ್ಕಕ್ಕೆ: 99455 17687.