<p><strong>ಸಾಗರ:</strong> ಆಧುನಿಕತೆಯ ಸಂದರ್ಭದಲ್ಲಿ ಪುರಾಣದ ಕೃತಿಗಳಿಗಿಂತ ಹೆಚ್ಚಾಗಿ ಶಾಸ್ತ್ರ ಗ್ರಂಥಗಳನ್ನು ಅವಲಂಬಿಸಿರುವುದು ತಪ್ಪು ಕ್ರಮ ಎಂದು ಲೇಖಕ ಮನು ಚಕ್ರವರ್ತಿ ಹೇಳಿದರು.<br /> <br /> ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ’ ಸಂಸ್ಕೃತಿ ಶಿಬಿರದಲ್ಲಿ ಬುಧವಾರ ನಡೆದ ಗೋಷ್ಠಿಯಲ್ಲಿ ಸಾಹಿತ್ಯದ ಕಲ್ಪನೆಯಲ್ಲಿ ಪರಂಪರೆ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಪುರಾಣದ ಕತಿಗಳಲ್ಲಿ ಮನುಷ್ಯನ ಜೀವನದ ವಿವಿಧ ಮಜಲುಗಳನ್ನು, ಸಂಕೀರ್ಣತೆಯನ್ನು ಶೋಧಿಸುವ ವಿಶಿಷ್ಟ ಗುಣ ಇದೆ ಎಂದರು.<br /> <br /> ಪರಂಪರೆ ಎನ್ನುವುದು ಒಂದು ಪರಿಕಲ್ಪನೆ. ರೂಢಿಗಳು, ಸಂಪ್ರದಾಯ, ಪ್ರಮೇಯ, ಪ್ರಮಾಣ... ಹೀಗೆ ಅನೇಕ ಸಂಗತಿಗಳು ಸೇರಿ ಪರಂಪರೆ ಎನ್ನುವುದು ಸೃಷ್ಟಿಯಾಗಿದೆ. ಪರಂಪರೆಗೆ ಪಠ್ಯದ ಅಥವಾ ಗಡಿರೇಖೆಗಳ ನಿರ್ಬಂಧವಿಲ್ಲ. ಆಚರಣೆಯ ಕ್ರಿಯೆ ಬದಲಾದರೆ ಪರಂಪರೆಯ ಪ್ರಮಾಣವೂ ಬದಲಾಗುತ್ತದೆ ಎಂದು ಹೇಳಿದರು.<br /> <br /> ಕಾವ್ಯದಲ್ಲಿನ ಸೌಂದರ್ಯ ಮೀಮಾಂಸೆಗೆ ರಾಜಕೀಯ ಆಯಾಮವೂ ಇದೆ. ಆದರೆ, ರಾಮಾಯಣದಂತಹ ಕಾವ್ಯವನ್ನು ರಸ, ಧ್ವನಿ, ಸೌಂದರ್ಯ ಮೀಮಾಂಸೆಯ ದೃಷ್ಟಿಯಿಂದ ನೋಡದೇ ಕೇವಲ ಪೂಜ್ಯ ಭಾವನೆಯಿಂದ ನೋಡಿದರೆ ಅದರ ಅಂತಃಪಠ್ಯ ಅರ್ಥವಾಗುವುದಿಲ್ಲ ಎಂದು ಪುತಿನ ಅವರು ಹೇಳಿದ ಮಾತನ್ನು ನೆನಪಿಸಿದರು.<br /> <br /> ಭಾರತದಲ್ಲಿ ಆಧುನಿಕ ಪ್ರಜ್ಞೆ ಹಠಾತ್ತಾಗಿ ಬಂದದ್ದೇ, ಇಲ್ಲವೆ ಎನ್ನುವಂತಹ ಸಮಸ್ಯಾತ್ಮಕ ಸಂಗತಿಗಳಿಗೆ ಕನ್ನಡದ ಲೇಖಕರಾದ ಮಾಸ್ತಿ ವೆಂಕಟೇಶ್ ಐಯ್ಯಂಗಾರ್, ಬಾಗಲೋಡಿ ದೇವರಾಯ, ಸೇಡಿಯಾಪು ಕೃಷ್ಣಭಟ್ಟ ಮೊದಲಾದವರು ತಮ್ಮ ಸಾಹಿತ್ಯದ ಮೂಲಕ ಹೇಗೆ ಅನುಸಂಧಾನ ನಡೆಸಿದ್ದಾರೆ ಎಂಬುದನ್ನು ವಿವರಿಸಿದರು.<br /> <br /> ಹೈದರಾಬಾದ್ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಪ್ರಾಧ್ಯಾಪಕ ರಘುರಾಮ್ ರಾಜು ಮಾತನಾಡಿ, ಪರಂಪರೆಯನ್ನು ಪುನರಾವಲೋಕನ ಅಥವಾ ಪುನರ್ಶೋಧನೆ ಮಾಡುವ ಹೊತ್ತಿಗೆ ಒಳಗಿನವರು ಅಥವಾ ಹೊರಗಿನವರು ಎಂಬ ಭೇದವನ್ನು ಒಪ್ಪಿಕೊಳ್ಳುವುದು ಕಷ್ಟ. ಈ ಹಂತದಲ್ಲಿ ನಾವುಗಳು ಸಂಪೂರ್ಣವಾಗಿ ಒಳಗಿನವರು ಅಥವಾ ಸಂಪೂರ್ಣವಾಗಿ ಹೊರಗಿನವರು ಆಗಿರುವುದಿಲ್ಲ ಎನ್ನುವುದನ್ನು ಉದಾಹರಿಸಿದರು.<br /> <br /> ಭಾರತೀಯ ಮೂಲದ ನರೇಂದ್ರನಾಥನಿಗೆ ರಾಮಕೃಷ್ಣ ಪರಮಹಂಸರ ಪರಿಚಯವಾಗಿ ವಿವೇಕಾನಂದರಾಗಿ ಪರಿವರ್ತನೆ ಗೊಳ್ಳಲು ಕಾರಣರಾದವರು ಒಬ್ಬ ಕ್ರೈಸ್ತ ಪಾದ್ರಿ. ಅಲ್ಲಿಯವರೆಗೂ ವಿವೇಕಾನಂದರು ಪರಂಪರೆಯ ಹೊರಗಿನವರಾಗಿದ್ದು, ನಂತರ ಒಳಗಿನವರಾದರು ಎಂದರು.<br /> <br /> ಪರಂಪರೆಗೆ ಸಂಬಂಧಿಸಿದಂತೆ ಹೇಳುವುದಾದರೆ ಗಾಂಧೀಜಿ ಒಳಗಿನ ಮತ್ತು ಹೊರಗಿನ, ಹೊಸತು ಹಾಗೂ ಹಳತು ಈ ಎರಡೂ ಸಂಗತಿಗಳನ್ನು ಹದವಾಗಿ ಬೆಸೆದ ವ್ಯಕ್ತಿಯಂತೆ ಕಾಣುತ್ತಾರೆ. ಪರಂಪರೆ ಹಾಗೂ ಆಧುನಿಕತೆ ಇವೆರಡರಿಂದಲೂ ಪಡೆದ ಮತ್ತು ನಿರಾಕರಿಸಿದ ಆಧುನಿಕ ಭಾರತದ ಅತಿ ದೊಡ್ಡ ಮಾದರಿ ಎಂದರೆ ಗಾಂಧೀಜಿ ಎಂದು ಹೇಳಿದರು.<br /> <br /> ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಯಾವ ಧರ್ಮಕ್ಕೆ ಸೇರಬೇಕು ಎನ್ನುವ ಬಗ್ಗೆ ನಿರ್ಧರಿಸಲು 27 ವರ್ಷ ತೆಗೆದುಕೊಂಡರು. ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟರೂ ಮತ್ತೊಂದು ಧರ್ಮವನ್ನೇ ಆರಿಸಿಕೊಂಡರು. ಇಂತಹ ಒಂದು ವೈರುಧ್ಯ ಅಥವಾ ಅಂತರ್ ವಿರೋಧವನ್ನು ನಮ್ಮಲ್ಲಿ ಕಾಣಬಹುದು ಎಂದರು.<br /> <br /> ಭಾರತದಲ್ಲಿ ಆಧುನಿಕರಾಗಬೇಕು ಎಂದರೆ ಪರಂಪರೆಯನ್ನು ಪೂರ್ತಿಯಾಗಿ ಬಿಡಲೇಬೇಕು ಎಂದೇನೂ ಇಲ್ಲ. ಆದರೆ, ಪಶ್ಚಿಮ ದೇಶಗಳಲ್ಲಿ ಹಾಗಿಲ್ಲ. ಭಾರತದ ಮಟ್ಟಿಗೆ ಪರಂಪರೆ ಹಾಗೂ ಆಧುನಿಕತೆಯ ಸ್ಪಷ್ಟ ವರ್ಗೀಕರಣ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.<br /> <br /> ಲೇಖಕ ಸುಂದರ ಸಾರುಕ್ಕೈ ಪ್ರತಿಕ್ರಿಯಿಸಿದರು. ಚರ್ಚೆಯಲ್ಲಿ ಡಾ.ಗೋಪಾಲಗುರು, ನಟರಾಜ ಹೊನ್ನವಳ್ಳಿ, ಎಂ.ಎಸ್.ಶ್ರೀರಾಮ್, ದಿವಾಕರ್ ಮೊದಲಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಆಧುನಿಕತೆಯ ಸಂದರ್ಭದಲ್ಲಿ ಪುರಾಣದ ಕೃತಿಗಳಿಗಿಂತ ಹೆಚ್ಚಾಗಿ ಶಾಸ್ತ್ರ ಗ್ರಂಥಗಳನ್ನು ಅವಲಂಬಿಸಿರುವುದು ತಪ್ಪು ಕ್ರಮ ಎಂದು ಲೇಖಕ ಮನು ಚಕ್ರವರ್ತಿ ಹೇಳಿದರು.<br /> <br /> ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ’ ಸಂಸ್ಕೃತಿ ಶಿಬಿರದಲ್ಲಿ ಬುಧವಾರ ನಡೆದ ಗೋಷ್ಠಿಯಲ್ಲಿ ಸಾಹಿತ್ಯದ ಕಲ್ಪನೆಯಲ್ಲಿ ಪರಂಪರೆ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಪುರಾಣದ ಕತಿಗಳಲ್ಲಿ ಮನುಷ್ಯನ ಜೀವನದ ವಿವಿಧ ಮಜಲುಗಳನ್ನು, ಸಂಕೀರ್ಣತೆಯನ್ನು ಶೋಧಿಸುವ ವಿಶಿಷ್ಟ ಗುಣ ಇದೆ ಎಂದರು.<br /> <br /> ಪರಂಪರೆ ಎನ್ನುವುದು ಒಂದು ಪರಿಕಲ್ಪನೆ. ರೂಢಿಗಳು, ಸಂಪ್ರದಾಯ, ಪ್ರಮೇಯ, ಪ್ರಮಾಣ... ಹೀಗೆ ಅನೇಕ ಸಂಗತಿಗಳು ಸೇರಿ ಪರಂಪರೆ ಎನ್ನುವುದು ಸೃಷ್ಟಿಯಾಗಿದೆ. ಪರಂಪರೆಗೆ ಪಠ್ಯದ ಅಥವಾ ಗಡಿರೇಖೆಗಳ ನಿರ್ಬಂಧವಿಲ್ಲ. ಆಚರಣೆಯ ಕ್ರಿಯೆ ಬದಲಾದರೆ ಪರಂಪರೆಯ ಪ್ರಮಾಣವೂ ಬದಲಾಗುತ್ತದೆ ಎಂದು ಹೇಳಿದರು.<br /> <br /> ಕಾವ್ಯದಲ್ಲಿನ ಸೌಂದರ್ಯ ಮೀಮಾಂಸೆಗೆ ರಾಜಕೀಯ ಆಯಾಮವೂ ಇದೆ. ಆದರೆ, ರಾಮಾಯಣದಂತಹ ಕಾವ್ಯವನ್ನು ರಸ, ಧ್ವನಿ, ಸೌಂದರ್ಯ ಮೀಮಾಂಸೆಯ ದೃಷ್ಟಿಯಿಂದ ನೋಡದೇ ಕೇವಲ ಪೂಜ್ಯ ಭಾವನೆಯಿಂದ ನೋಡಿದರೆ ಅದರ ಅಂತಃಪಠ್ಯ ಅರ್ಥವಾಗುವುದಿಲ್ಲ ಎಂದು ಪುತಿನ ಅವರು ಹೇಳಿದ ಮಾತನ್ನು ನೆನಪಿಸಿದರು.<br /> <br /> ಭಾರತದಲ್ಲಿ ಆಧುನಿಕ ಪ್ರಜ್ಞೆ ಹಠಾತ್ತಾಗಿ ಬಂದದ್ದೇ, ಇಲ್ಲವೆ ಎನ್ನುವಂತಹ ಸಮಸ್ಯಾತ್ಮಕ ಸಂಗತಿಗಳಿಗೆ ಕನ್ನಡದ ಲೇಖಕರಾದ ಮಾಸ್ತಿ ವೆಂಕಟೇಶ್ ಐಯ್ಯಂಗಾರ್, ಬಾಗಲೋಡಿ ದೇವರಾಯ, ಸೇಡಿಯಾಪು ಕೃಷ್ಣಭಟ್ಟ ಮೊದಲಾದವರು ತಮ್ಮ ಸಾಹಿತ್ಯದ ಮೂಲಕ ಹೇಗೆ ಅನುಸಂಧಾನ ನಡೆಸಿದ್ದಾರೆ ಎಂಬುದನ್ನು ವಿವರಿಸಿದರು.<br /> <br /> ಹೈದರಾಬಾದ್ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಪ್ರಾಧ್ಯಾಪಕ ರಘುರಾಮ್ ರಾಜು ಮಾತನಾಡಿ, ಪರಂಪರೆಯನ್ನು ಪುನರಾವಲೋಕನ ಅಥವಾ ಪುನರ್ಶೋಧನೆ ಮಾಡುವ ಹೊತ್ತಿಗೆ ಒಳಗಿನವರು ಅಥವಾ ಹೊರಗಿನವರು ಎಂಬ ಭೇದವನ್ನು ಒಪ್ಪಿಕೊಳ್ಳುವುದು ಕಷ್ಟ. ಈ ಹಂತದಲ್ಲಿ ನಾವುಗಳು ಸಂಪೂರ್ಣವಾಗಿ ಒಳಗಿನವರು ಅಥವಾ ಸಂಪೂರ್ಣವಾಗಿ ಹೊರಗಿನವರು ಆಗಿರುವುದಿಲ್ಲ ಎನ್ನುವುದನ್ನು ಉದಾಹರಿಸಿದರು.<br /> <br /> ಭಾರತೀಯ ಮೂಲದ ನರೇಂದ್ರನಾಥನಿಗೆ ರಾಮಕೃಷ್ಣ ಪರಮಹಂಸರ ಪರಿಚಯವಾಗಿ ವಿವೇಕಾನಂದರಾಗಿ ಪರಿವರ್ತನೆ ಗೊಳ್ಳಲು ಕಾರಣರಾದವರು ಒಬ್ಬ ಕ್ರೈಸ್ತ ಪಾದ್ರಿ. ಅಲ್ಲಿಯವರೆಗೂ ವಿವೇಕಾನಂದರು ಪರಂಪರೆಯ ಹೊರಗಿನವರಾಗಿದ್ದು, ನಂತರ ಒಳಗಿನವರಾದರು ಎಂದರು.<br /> <br /> ಪರಂಪರೆಗೆ ಸಂಬಂಧಿಸಿದಂತೆ ಹೇಳುವುದಾದರೆ ಗಾಂಧೀಜಿ ಒಳಗಿನ ಮತ್ತು ಹೊರಗಿನ, ಹೊಸತು ಹಾಗೂ ಹಳತು ಈ ಎರಡೂ ಸಂಗತಿಗಳನ್ನು ಹದವಾಗಿ ಬೆಸೆದ ವ್ಯಕ್ತಿಯಂತೆ ಕಾಣುತ್ತಾರೆ. ಪರಂಪರೆ ಹಾಗೂ ಆಧುನಿಕತೆ ಇವೆರಡರಿಂದಲೂ ಪಡೆದ ಮತ್ತು ನಿರಾಕರಿಸಿದ ಆಧುನಿಕ ಭಾರತದ ಅತಿ ದೊಡ್ಡ ಮಾದರಿ ಎಂದರೆ ಗಾಂಧೀಜಿ ಎಂದು ಹೇಳಿದರು.<br /> <br /> ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಯಾವ ಧರ್ಮಕ್ಕೆ ಸೇರಬೇಕು ಎನ್ನುವ ಬಗ್ಗೆ ನಿರ್ಧರಿಸಲು 27 ವರ್ಷ ತೆಗೆದುಕೊಂಡರು. ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟರೂ ಮತ್ತೊಂದು ಧರ್ಮವನ್ನೇ ಆರಿಸಿಕೊಂಡರು. ಇಂತಹ ಒಂದು ವೈರುಧ್ಯ ಅಥವಾ ಅಂತರ್ ವಿರೋಧವನ್ನು ನಮ್ಮಲ್ಲಿ ಕಾಣಬಹುದು ಎಂದರು.<br /> <br /> ಭಾರತದಲ್ಲಿ ಆಧುನಿಕರಾಗಬೇಕು ಎಂದರೆ ಪರಂಪರೆಯನ್ನು ಪೂರ್ತಿಯಾಗಿ ಬಿಡಲೇಬೇಕು ಎಂದೇನೂ ಇಲ್ಲ. ಆದರೆ, ಪಶ್ಚಿಮ ದೇಶಗಳಲ್ಲಿ ಹಾಗಿಲ್ಲ. ಭಾರತದ ಮಟ್ಟಿಗೆ ಪರಂಪರೆ ಹಾಗೂ ಆಧುನಿಕತೆಯ ಸ್ಪಷ್ಟ ವರ್ಗೀಕರಣ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.<br /> <br /> ಲೇಖಕ ಸುಂದರ ಸಾರುಕ್ಕೈ ಪ್ರತಿಕ್ರಿಯಿಸಿದರು. ಚರ್ಚೆಯಲ್ಲಿ ಡಾ.ಗೋಪಾಲಗುರು, ನಟರಾಜ ಹೊನ್ನವಳ್ಳಿ, ಎಂ.ಎಸ್.ಶ್ರೀರಾಮ್, ದಿವಾಕರ್ ಮೊದಲಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>