ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಬಹುಮಾನ; ಅರ್ಜಿ ಆಹ್ವಾನ

Last Updated 2 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಶಿವಮೊಗ್ಗ:  2014ನೇ ಸಾಲಿನಲ್ಲಿ ಪ್ರಕಟವಾದ ವಿವಿಧ ಪ್ರಕಾರಗಳ ಹತ್ತು ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಕರ್ನಾಟಕ ಸಂಘವು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೃತಿಗಳನ್ನು ಏ.10ರ ಒಳಗಾಗಿ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್.ರಸ್ತೆ, ಶಿವಮೊಗ್ಗ-577201 ಇಲ್ಲಿಗೆ ಕಳುಹಿಸಬಹುದು.

ಪುಸ್ತಕ ಪ್ರಶಸ್ತಿಯ ವಿವರ: ಕಾದಂಬರಿ (ಕುವೆಂಪು ಪ್ರಶಸ್ತಿ), ಅನುವಾದಿತ ಕೃತಿ (ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ), ಮಹಿಳಾ ಸಾಹಿತ್ಯ (ಶ್ರೀಮತಿ ಎಂ.ಕೆ. ಇಂದಿರಾ ಪ್ರಶಸ್ತಿ), ಮುಸ್ಲಿಂ ಬರಹಗಾರರ ಕೃತಿ (ಪಿ.ಲಂಕೇಶ್ ಪ್ರಶಸ್ತಿ), ಕವನ  ಸಂಕಲನ (ಡಾ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ), ಅಂಕಣ ಬರಹಗಾರರಿಗೆ (ಡಾ. ಹಾ.ಮಾ.ನಾಯಕ ಪ್ರಶಸ್ತಿ), ಸಣ್ಣ ಕಥಾಸಂಕಲನ (ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ), ನಾಟಕ ಕೃತಿ (ಕೆ.ವಿ.ಸುಬ್ಬಣ್ಣ ಪ್ರಶಸ್ತಿ), ಪ್ರವಾಸ ಸಾಹಿತ್ಯ (ಶ್ರೀಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ ಪ್ರಶಸ್ತಿ), ವಿಜ್ಞಾನ ಸಾಹಿತ್ಯ (ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ), ಮಕ್ಕಳ ಸಾಹಿತ್ಯ (ನಾ.ಡಿಸೋಜ ಪ್ರಶಸ್ತಿ), ವೈದ್ಯ ಸಾಹಿತ್ಯ (ಡಾ.ಎಚ್.ಡಿ.ಚಂದ್ರಪ್ಪಗೌಡ ಪ್ರಶಸ್ತಿ) ಒಟ್ಟು ಹತ್ತು  ಪ್ರಕಾರಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈಗಾಗಲೇ  ಪುಸ್ತಕ ಬಹುಮಾನ ಒಂದು ಬಾರಿ ಪಡೆದವರು ಪುನಃ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಮಾಹಿತಿಗೆ ದೂ.ಸಂ. 08182 -277406 ಸಂಪರ್ಕಿಸಬಹುದು ಎಂದು ಗೌರವ ಕಾರ್ಯದರ್ಶಿ ಡಾ.ಎಚ್.ಎಸ್.ನಾಗಭೂಷಣ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT