ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿಕೊಳ್ಳುವಲ್ಲಿ ಕರ್ತವ್ಯ ಲೋಪ ಮಾಡಿದ ಇನ್್ಸಪೆಕ್ಟರ್ ಅನ್ನು ಸರ್ಕಾರ ಕೊನೆಗೂ ಅಮಾನತು ಮಾಡಿ ಅವರ ಮೇಲೆ ದೂರು ದಾಖಲಿಸಿದೆ.
ಈ ಹಿಂದೆ, ಅತ್ಯಾಚಾರ ಮತ್ತು ವರದಕ್ಷಿಣೆ ಕಿರುಕುಳದಂತಹ ಸಮಸ್ಯೆಗಳ ಸಂಬಂಧ ದೂರು ದಾಖಲಿಸಿಕೊಳ್ಳುವಲ್ಲಿ ಲೋಪ ಎಸಗಿರುವ ಅನೇಕ ಉದಾಹರಣೆಗಳು ಇದ್ದರೂ, ಈ ಪ್ರಕರಣದಲ್ಲಿ ಯುವತಿಯ ಧೈರ್ಯ ಮತ್ತು ಹೋರಾಟದ ಕಾರಣದಿಂದ ಹಾಗೂ ವಿರೋಧ ಪಕ್ಷಗಳ ಒತ್ತಡದಿಂದ ಲೋಪಕ್ಕೆ ದಂಡಪ್ರಯೋಗ ಆಗಿದೆ.
ಈ ಪ್ರಕರಣ ಪೊಲೀಸರಿಗೂ ಪಾಠವಾಗಿದೆ. ಅಂತೆಯೇ ಸಾರ್ವಜನಿಕರ ಹೋರಾಟಕ್ಕೂ ಒಂದು ಶಕ್ತಿ ತುಂಬಿದೆ. ಇನ್ನು ಮುಂದಾದರೂ ದೂರು ದಾಖಲಿಸುವ ಸಂದರ್ಭದಲ್ಲಿ, ವಿಳಂಬ ಮಾಡದೆ, ಮತ ಭೇದ ಮಾಡದೆ, ಯಾವುದೇ ಒತ್ತಡ ಆಮಿಷಗಳಿಗೆ ಮಣಿಯದೆ ಪೊಲೀಸರು ನ್ಯಾಯಯುತವಾಗಿ ಸ್ಪಂದಿಸುವುದು ಅಗತ್ಯ.
ಅಪರಾಧ ನಿಗ್ರಹ ಮತ್ತು ನಿಯಂತ್ರಣದಲ್ಲಿ ಪೊಲೀಸರ ಸೇವೆ ಶ್ಲಾಘನೀಯ ಆದರೂ ಕೆಲವೊಂದು ಪ್ರಕರಣಗಳಲ್ಲಿ ಕೆಲವರು ಮಾಡುವ ಕರ್ತವ್ಯಲೋಪಕ್ಕೆ, ಇಲಾಖೆ ಅನುಮಾನದ ಸುಳಿಗೆ ಸಿಲುಕುತ್ತದೆ. ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಪೊಲೀಸರು ತಾರತಮ್ಯ ಎಸಗದಿರಲಿ.
–ಅನಾರ್ಕಲಿ ಸಲೀಂಚಿಣ್ಯ, ಶ್ರೀರಂಗಪಟ್ಟಣ