ಬೆಂಗಳೂರು: ಕನ್ನಡ-ಸಂಸ್ಕೃತಿ ಇಲಾಖೆ 2011ನೇ ಸಾಲಿನ `ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ'ಯು ಸೃಜನಶೀಲ ಲೇಖಕಿ ಡಾ. ಸರಸ್ವತಿ ಚಿಮ್ಮಲಗಿ ಅವರಿಗೆ ಸಂದಿದೆ. ಇವರು ಮೂಲತಃ ವಿಜಾಪುರದವರು. ಆದರೆ, ಇವರ ಕಾರ್ಯಕ್ಷೇತ್ರ ಗುಲ್ಬರ್ಗ.
2011ನೇ ಸಾಲಿನ `ಕುಮಾರವ್ಯಾಸ ಪ್ರಶಸ್ತಿ'ಗೆ ಬೆಂಗಳೂರಿನ ಗಮಕಿ ಎಚ್.ಕೆ. ರಾಮಸ್ವಾಮಿ ಅವರು ಆಯ್ಕೆ ಆಗಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 3 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿವೆ.