ಮೈಸೂರು: ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಸ್ತಬ್ಧಚಿತ್ರಗಳು ದಸರಾ ಮಹೋತ್ಸವದ ಬಂಬೂಸವಾರಿಯ ಮೆರುಗನ್ನು ಇಮ್ಮಡಿಗೊಳಿಸಿದವು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸಾಗಿದ ಇವು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು.
ರಾಜ್ಯದ 29 ಜಿಲ್ಲಾ ಪಂಚಾಯಿತಿ, 6 ಇಲಾಖೆ, 6 ನಿಗಮ, ತೆಲಂಗಾಣ ಮತ್ತು ಪಾಂಡಿಚೇರಿ ಸೇರಿದಂತೆ ಒಟ್ಟು 44 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಕಲೆ ಸಂಸ್ಕೃತಿಯನ್ನು ಬಿಂಬಿಸುವ, ಪ್ರಾದೇಶಿಕ ವಿಶೇಷತೆಯನ್ನು ಪ್ರತಿನಿಧಿಸುವ ಪ್ರಯತ್ನ ಅನನ್ಯವಾಗಿತ್ತು.
ಕನ್ನಡ ಸಾಹಿತ್ಯ, ಸಂಸ್ಕೃತಿಯ ವೈಭವ ಹೆಚ್ಚಿಸಿದ ಸಾಹಿತಿ, ಕಲಾವಿದರನ್ನು ಸ್ಮರಿಸಲಾಯಿತು. ಪ್ರಮುಖ ಪ್ರವಾಸಿ ತಾಣಗಳು, ವಾಸ್ತುಶಿಲ್ಪ ಕಲೆಯ ದೇಗುಲಗಳು ಸ್ತಬ್ಧಚಿತ್ರಕ್ಕೆ ವಸ್ತುವಾಗಿದ್ದವು. ಜಿಲ್ಲಾ ಪಂಚಾಯಿತಿಗಳು ನಿರ್ಮಿಸಿದ ಸ್ತಬ್ಧಚಿತ್ರವನ್ನು ಪ್ರಾದೇಶಿಕವಾರು ವಿಂಗಡಿಸಿ ಬಹುಮಾನ ನೀಡಲಾಗಿದೆ. ಪ್ರಥಮ ಸ್ಥಾನ ಪಡೆದ ಸ್ತಬ್ಧಚಿತ್ರಕ್ಕೆ ₨ 10 ಸಾವಿರ, ಸಮಾಧಾನಕರ ಸ್ಥಾನ ಪಡೆದ ಸ್ತಬ್ಧಚಿತ್ರಕ್ಕೆ ₨ 5 ಸಾವಿರ ಬಹುಮಾನ ನೀಡಲಾಯಿತು.
ವಿಜೇತ ಸ್ತಬ್ಧಚಿತ್ರ ಪಟ್ಟಿ ಹೊರ ರಾಜ್ಯ ವಿಭಾಗ