<p><strong>ಶಿರಸಿ (ಉತ್ತರ ಕನ್ನಡ ಜಿಲ್ಲೆ):</strong> ತಾಲ್ಲೂಕಿನ ಹತ್ತರಗಿ ಹಾವಳಿಮನೆಯಲ್ಲಿ ಪುರಾತನ ಶಿಲಾಮಯ ದೇವಾಲಯ ಪತ್ತೆಯಾಗಿದೆ. ‘12ನೇ ಶತಮಾನದ ದೇವಾಲಯ ಇದಾಗಿರಬಹುದೆಂದು ಅಂದಾಜಿಸಲಾಗಿದೆ. ಹಾನಗಲ್ ಕದಂಬರು ನಿರ್ಮಿಸಿದ್ದಾರೆ ಎನ್ನಲಾದ ಈ ದೇವಾಲಯ, ಸುಂದರ ಕೆತ್ತನೆಯ 16 ಕಂಬಗಳನ್ನು ಒಳಗೊಂಡಿದೆ. ದೇವಾಲಯದಲ್ಲಿ ಸಭಾ ಮಂಟಪ, ನವರಂಗ, ಗರ್ಭಗುಡಿ ಇದೆ.<br /> <br /> ಗರ್ಭಗುಡಿಗೆ ಪ್ರದಕ್ಷಿಣಾ ಪಥವಿದೆ. ದೇವಾಲಯದ ಒಳಗೆ ಸಪ್ತ ಮಾತೃಕೆಯರ ಮೂರ್ತಿ, ಮಹಿಷಾಸುರ ಮರ್ದಿನಿ, ಗಣಪತಿ ಹಾಗೂ ನಾರಾಯಣ ವಿಗ್ರಹಗಳಿವೆ. ಪ್ರಾಚೀನ ಶಿವಲಿಂಗ ಸಹ ಇದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ ತಿಳಿಸಿದ್ದಾರೆ.<br /> <br /> ‘ದೇವಾಲಯ ಎದುರು ಸುಮಾರು 17ನೇ ಶತಮಾನದ ಶಾಸನವೊಂದಿದೆ. ಸುಮಾರು 300 ವರ್ಷಗಳ ಹಿಂದೆ ಈ ದೇವಾಲಯ ಜೀರ್ಣೋದ್ಧಾರಗೊಂಡ ಕುರುಹುಗಳು ಮೇಲ್ನೋಟಕ್ಕೆ ಕಾಣಸಿಗುತ್ತವೆ’ ಎಂದು ಅವರು ಹೇಳಿದ್ದಾರೆ. ಕ್ಷೇತ್ರಾನ್ವೇಷಣೆಯ ಸಂದರ್ಭದಲ್ಲಿ ಸ್ಥಳೀಯರಾದ ಜಿ.ಎನ್. ಹೆಗಡೆ ಹಾವಳಿಮನೆ, ಆನಂದ ಹೆಗಡೆ ಇದ್ದರು. ಬಹುಭಾಗ ಭಗ್ನಗೊಂಡ ದೇವಾಲಯದ ಜೀರ್ಣೋದ್ಧಾರಕ್ಕೆ ಸ್ಥಳೀಯರು ಮುಂದಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ (ಉತ್ತರ ಕನ್ನಡ ಜಿಲ್ಲೆ):</strong> ತಾಲ್ಲೂಕಿನ ಹತ್ತರಗಿ ಹಾವಳಿಮನೆಯಲ್ಲಿ ಪುರಾತನ ಶಿಲಾಮಯ ದೇವಾಲಯ ಪತ್ತೆಯಾಗಿದೆ. ‘12ನೇ ಶತಮಾನದ ದೇವಾಲಯ ಇದಾಗಿರಬಹುದೆಂದು ಅಂದಾಜಿಸಲಾಗಿದೆ. ಹಾನಗಲ್ ಕದಂಬರು ನಿರ್ಮಿಸಿದ್ದಾರೆ ಎನ್ನಲಾದ ಈ ದೇವಾಲಯ, ಸುಂದರ ಕೆತ್ತನೆಯ 16 ಕಂಬಗಳನ್ನು ಒಳಗೊಂಡಿದೆ. ದೇವಾಲಯದಲ್ಲಿ ಸಭಾ ಮಂಟಪ, ನವರಂಗ, ಗರ್ಭಗುಡಿ ಇದೆ.<br /> <br /> ಗರ್ಭಗುಡಿಗೆ ಪ್ರದಕ್ಷಿಣಾ ಪಥವಿದೆ. ದೇವಾಲಯದ ಒಳಗೆ ಸಪ್ತ ಮಾತೃಕೆಯರ ಮೂರ್ತಿ, ಮಹಿಷಾಸುರ ಮರ್ದಿನಿ, ಗಣಪತಿ ಹಾಗೂ ನಾರಾಯಣ ವಿಗ್ರಹಗಳಿವೆ. ಪ್ರಾಚೀನ ಶಿವಲಿಂಗ ಸಹ ಇದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ ತಿಳಿಸಿದ್ದಾರೆ.<br /> <br /> ‘ದೇವಾಲಯ ಎದುರು ಸುಮಾರು 17ನೇ ಶತಮಾನದ ಶಾಸನವೊಂದಿದೆ. ಸುಮಾರು 300 ವರ್ಷಗಳ ಹಿಂದೆ ಈ ದೇವಾಲಯ ಜೀರ್ಣೋದ್ಧಾರಗೊಂಡ ಕುರುಹುಗಳು ಮೇಲ್ನೋಟಕ್ಕೆ ಕಾಣಸಿಗುತ್ತವೆ’ ಎಂದು ಅವರು ಹೇಳಿದ್ದಾರೆ. ಕ್ಷೇತ್ರಾನ್ವೇಷಣೆಯ ಸಂದರ್ಭದಲ್ಲಿ ಸ್ಥಳೀಯರಾದ ಜಿ.ಎನ್. ಹೆಗಡೆ ಹಾವಳಿಮನೆ, ಆನಂದ ಹೆಗಡೆ ಇದ್ದರು. ಬಹುಭಾಗ ಭಗ್ನಗೊಂಡ ದೇವಾಲಯದ ಜೀರ್ಣೋದ್ಧಾರಕ್ಕೆ ಸ್ಥಳೀಯರು ಮುಂದಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>