ಮಂಗಳೂರು: ನಗರದ ಹೊರ ವಲಯದಲ್ಲಿರುವ ಪಿಲಿಕುಳದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧ ವಾರ ಉದ್ಘಾಟಿಸಿದರು.
ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ (ಎನ್ಸಿಎಸ್ಎಂ), ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಕಾರದಲ್ಲಿ, 50:50ರ ಅನುಪಾತದಲ್ಲಿ 8.5 ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ.
4 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಕೇಂದ್ರದಲ್ಲಿ ಜೀವ ವೈವಿಧ್ಯ, ಮುಂಚೂಣಿ ತಂತ್ರಜ್ಞಾನ ಮತ್ತು ಮೋಜಿನ ವಿಜ್ಞಾನ ಹೆಸರಿನ ಶಾಶ್ವತ ಪ್ರದರ್ಶನಾಲಯಗಳಿವೆ. ‘ಪ್ಲಾನೆಟ್ ಅಂಡರ್ ಪ್ರೆಷರ್’ ಎಂಬ ತಾತ್ಕಾಲಿಕ ಪ್ರದರ್ಶನಾಲಯವೂ ಇದ್ದು, 3ಡಿ ಪ್ರದರ್ಶನಾಲಯ, ತಾರಾಮಂಡಲ, ವಿಜ್ಞಾನ ಪ್ರಾತ್ಯಕ್ಷಿಕೆ ವಿಭಾಗ, ಸೃಜನಾತ್ಮಕ ಕಲಿಕಾ ಕೇಂದ್ರ ಗ್ರಂಥಾ ಲಯ, ಆಕಾಶ ವೀಕ್ಷಣೆಗೆ ದೂರದರ್ಶಕ ಮತ್ತು ವಿಜ್ಞಾನ ಉದ್ಯಾನವನವೂ ಇದೆ. ಜೀವ ವೈವಿಧ್ಯಕ್ಕೆ ಸಂಬಂಧಿಸಿ ದೇಶದಲ್ಲಿರುವ ಏಕೈಕ ಪ್ರದರ್ಶನಾಲಯ ಎಂಬ ಹೆಗ್ಗಳಿಕೆಯೂ ಈ ಕೇಂದ್ರಕ್ಕೆ ಸಲ್ಲುತ್ತದೆ.
ಮೋಜಿನ ವಿಜ್ಞಾನದ ಪ್ರದರ್ಶನಾಲಯ ವೀಕ್ಷಕರ ಆಸಕ್ತಿ ಕೆರಳಿಸಿ ಅನ್ವೇಷಣೆ ಮತ್ತು ಪ್ರಯೋಗದತ್ತ ಆಕರ್ಷಿಸಬಲ್ಲುದು. 3ಡಿ ಪ್ರದರ್ಶನಾಲಯ, ಮಕ್ಕಳ ಚಟುವಟಿಕೆ ತಾಣ, ವಿಜ್ಞಾನ ಪ್ರಾತ್ಯಕ್ಷಿಕೆ ಕೋಣೆ ಇದೆ. 3ಡಿ ಪ್ರದರ್ಶನಾಲಯದಲ್ಲಿ ಪೋಲರಾಯ್ಡ್ ಹಾಳೆಗಳು ಮತ್ತು ಡಿಜಿಟಲ್ ತಂತ್ರಜ್ಞಾನದ ಸಮ್ಮಿಲನ ದಿಂದ ಮೂರು ಆಯಾಮದ ವಿಜ್ಞಾನ ಚಲನ ಚಿತ್ರಗಳನ್ನು ಪ್ರದರ್ಶಿಸ ಲಾಗುವುದು. ಈ ವಿಜ್ಞಾನ ಉದ್ಯಾನ ದಲ್ಲಿ ಆಟವಾಡುತ್ತಾ ಮೋಜಿನ ಮೂಲಕ ವಿಜ್ಞಾನ ಕಲಿಯಲು ಅವಕಾಶ ಇದೆ. ಕೇಂದ್ರವನ್ನು ಉದ್ಘಾಟಿಸಿ ಮಾತ ನಾಡಿದ ಸಿ.ಎಂ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕೇಂದ್ರದ ಅನುದಾನ ಅಗತ್ಯವಾಗಿದೆ ಎಂದರು.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋ ದ್ಯಮ ಸಚಿವ ಶ್ರೀಪಾದ ನಾಯಕ್ , ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್. ಆರ್. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸ್ಥಳೀಯ ಶಾಸಕರು, ಸಂಸದರು ಉಪಸ್ಥಿತರಿದ್ದರು.