<p><strong>ಬೆಂಗಳೂರು:</strong> ‘ಇತ್ತೀಚೆಗೆ ಪ್ರೌಢ ಪ್ರಬಂಧಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಗುಣಮಟ್ಟ ಕುಸಿಯುತ್ತಿದೆ. ಈ ಬಗ್ಗೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.<br /> <br /> ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಪ್ರಸ್ತುತ ಇಡೀ ಪ್ರಪಂಚದಲ್ಲಿ ಗುರು–ಶಿಷ್ಯರ ಸಂಬಂಧ ಚೆನ್ನಾಗಿರುವುದು ಭಾರತದಲ್ಲಿ ಮಾತ್ರ. ಒಂದೊಮ್ಮೆ, ಶಿಕ್ಷಕರೇ ಮೋಸ ಮಾಡಿದರೆ ವಿದ್ಯಾರ್ಥಿಗಳಿಗೆ ನೈತಿಕತೆ ಹೇಳುವ ಧೈರ್ಯ ಹೇಗೆ ಬಂದಿತು? ಹೀಗಾಗಿ, ನಮ್ಮ ಆತ್ಮಪ್ರಜ್ಞೆಯನ್ನು ಜಾಗೃತವಾಗಿ ಇಟ್ಟುಕೊಳ್ಳಬೇಕಿದೆ’ ಎಂದು ಹೇಳಿದರು.<br /> <br /> ‘ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡುವ ಏಜೆಂಟ್ ಆಗಿರುವ ಶಿಕ್ಷಕ, ನಮ್ಮಲ್ಲಿ ಆ ಕೆಲಸದೊಂದಿಗೆ ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ’ ಎಂದು ತಿಳಿಸಿದರು.<br /> <br /> ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಮಾತನಾಡಿ, ‘ಬಹುತೇಕ ಶಿಕ್ಷಕರಲ್ಲಿ ಜ್ಞಾನವಿರುತ್ತದೆ. ಆದರೆ, ಅದನ್ನು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಬೋಧಿಸುವವರು ಕೆಲವರು ಮಾತ್ರ. ಶ್ರೇಷ್ಠ ಗುರುಗಳಾದವರು ತಮ್ಮ ಅನುಭವವನ್ನು ಧಾರೆ ಎರೆದು ಶಿಷ್ಯರನ್ನು ಬದಲಾಯಿಸುತ್ತಾರೆ’ ಎಂದು ಹೇಳಿದರು.<br /> <br /> ‘ಅಂತರ್ಜಾಲ ನಮಗೆ ಮಾಹಿತಿಯನ್ನು ಕೊಡಬಹುದೇ ವಿನಾ ಅನುಭವವನ್ನು ಅಲ್ಲ. ವೈದ್ಯವೃತ್ತಿಗೆ ಅನುಭವದ ಬೋಧನೆ ತುಂಬಾ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಗುರು–ಶಿಷ್ಯರ ಸಂಬಂಧದ ಗೌರವ ಕಡಿಮೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 13 ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಇತ್ತೀಚೆಗೆ ಪ್ರೌಢ ಪ್ರಬಂಧಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಗುಣಮಟ್ಟ ಕುಸಿಯುತ್ತಿದೆ. ಈ ಬಗ್ಗೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.<br /> <br /> ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಪ್ರಸ್ತುತ ಇಡೀ ಪ್ರಪಂಚದಲ್ಲಿ ಗುರು–ಶಿಷ್ಯರ ಸಂಬಂಧ ಚೆನ್ನಾಗಿರುವುದು ಭಾರತದಲ್ಲಿ ಮಾತ್ರ. ಒಂದೊಮ್ಮೆ, ಶಿಕ್ಷಕರೇ ಮೋಸ ಮಾಡಿದರೆ ವಿದ್ಯಾರ್ಥಿಗಳಿಗೆ ನೈತಿಕತೆ ಹೇಳುವ ಧೈರ್ಯ ಹೇಗೆ ಬಂದಿತು? ಹೀಗಾಗಿ, ನಮ್ಮ ಆತ್ಮಪ್ರಜ್ಞೆಯನ್ನು ಜಾಗೃತವಾಗಿ ಇಟ್ಟುಕೊಳ್ಳಬೇಕಿದೆ’ ಎಂದು ಹೇಳಿದರು.<br /> <br /> ‘ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡುವ ಏಜೆಂಟ್ ಆಗಿರುವ ಶಿಕ್ಷಕ, ನಮ್ಮಲ್ಲಿ ಆ ಕೆಲಸದೊಂದಿಗೆ ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ’ ಎಂದು ತಿಳಿಸಿದರು.<br /> <br /> ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಮಾತನಾಡಿ, ‘ಬಹುತೇಕ ಶಿಕ್ಷಕರಲ್ಲಿ ಜ್ಞಾನವಿರುತ್ತದೆ. ಆದರೆ, ಅದನ್ನು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಬೋಧಿಸುವವರು ಕೆಲವರು ಮಾತ್ರ. ಶ್ರೇಷ್ಠ ಗುರುಗಳಾದವರು ತಮ್ಮ ಅನುಭವವನ್ನು ಧಾರೆ ಎರೆದು ಶಿಷ್ಯರನ್ನು ಬದಲಾಯಿಸುತ್ತಾರೆ’ ಎಂದು ಹೇಳಿದರು.<br /> <br /> ‘ಅಂತರ್ಜಾಲ ನಮಗೆ ಮಾಹಿತಿಯನ್ನು ಕೊಡಬಹುದೇ ವಿನಾ ಅನುಭವವನ್ನು ಅಲ್ಲ. ವೈದ್ಯವೃತ್ತಿಗೆ ಅನುಭವದ ಬೋಧನೆ ತುಂಬಾ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಗುರು–ಶಿಷ್ಯರ ಸಂಬಂಧದ ಗೌರವ ಕಡಿಮೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 13 ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>