ಶಾರದಾ ಸಮೂಹ ಮತ್ತು ಸಮೂಹದ ಮುಖ್ಯಸ್ಥ ಸುದೀಪ್ತೊ ಸೆನ್ ಅವರ ಕಾನೂನು ಸಲಹೆಗಾರ ನರೇಶ್ ಬಲೋಡಿಯಾ ಅವರನ್ನೂ ಈ ಹಗರಣದ ಸಂಬಂಧ ಸಿಬಿಐ ಶುಕ್ರವಾರ ಬಂಧಿಸಿದೆ. ಪಿತೂರಿ, ವಂಚನೆ, ಹಣವನ್ನು ವರ್ಗಾಯಿಸಿದ ಆರೋಪದಲ್ಲಿ ನರೇಶ್ ಅವರನ್ನು ಬಂಧಿಸಲಾಗಿದೆ.
ಹಗರಣ ಕುರಿತು ಸುದೀಪ್ತೊ ಸೆನ್ ಸಿಬಿಐಗೆ ನೀಡಿದ್ದ ವಿವರಣೆ ಪತ್ರವನ್ನು ನರೇಶ್ ಬಲೋಡಿಯಾ ಬರೆದಿದ್ದರು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಶಾರದಾ ಹಗರಣದಲ್ಲಿ ಈಗಾಗಲೇ ತೃಣಮೂಲ ಕಾಂಗ್ರೆಸ್ ಸಂಸದರಾದ ಕುನಾಲ್ ಘೋಷ್, ಸೃಂಜಯ ಬೋಸ್ ಅವರನ್ನು ಸಿಬಿಐ ಬಂಧಿಸಿದೆ.