ನವದೆಹಲಿ: ಇಡೀ ದೇಶ ಜನತೆ ಅಪಾರ ನಿರೀಕ್ಷೆಯ ಜೊತೆಗೆ ಕುತೂಹಲದಿಂದ ಎದುರು ನೋಡುತ್ತಿರುವ 2014–15ನೇ ಸಾಲಿನ ರೈಲ್ವೆ ಬಜೆಟ್ ಮಂಡನೆ ಶುರುವಾಗಿದೆ.
ಈ ಬಾರಿ ಕರ್ನಾಟಕದವರಾದ ಸದಾನಂದ ಗೌಡ ಬಜೆಟ್ ಮಂಡಿಸಲಿದ್ದು, ರಾಜ್ಯ ಜನತೆಯಲ್ಲಿ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.
ಬಜೆಟ್ಗೂ ಮುನ್ನವೇ ಶೇ 14.2 ರಷ್ಟು ರೈಲು ಪ್ರಯಾಣ ದರ ಹಾಗೂ ಶೇ 6.5 ರಷ್ಟು ಸರಕು ಸಾಗಣೆ ದರ ಹೆಚ್ಚಿಸಿರುವ ಕಾರಣ ಬಜೆಟ್ನಲ್ಲಿ ಪ್ರಯಾಣ ದರ ಹೆಚ್ಚಳ ಪ್ರಸ್ತಾಪ ಕೈಬಿಡುವ ಎಲ್ಲಾ ಸಾಧ್ಯತೆಗಳಿವೆ.