ಜಿಗಣಿ–ಬನ್ನೆರುಘಟ್ಟ ರಸ್ತೆಯ ನಿಸರ್ಗ ಬಡಾವಣೆಯಿಂದ ನಗರದ ಇತರೆಡೆಗೆ ತೆರಳಲು ಸಿಟಿ ಬಸ್ಗಳನ್ನೇ ಜನರು ಆಶ್ರಯಿಸಿದ್ದಾರೆ. ಬಸ್ ಹತ್ತಲು ಕೊಪ್ಪಗೇಟ್ ಅಥವಾ ಹರಪನಹಳ್ಳಿಗೆ ತೆರಳಬೇಕು. ಈ ಎರಡೂ ನಿಲ್ದಾಣಗಳು ಜನವಸತಿ ಪ್ರದೇಶದಿಂದ ದೂರವಿದೆ.
ಎರಡು ಕಡೆ ತೆರಳಲು ಪಾದಚಾರಿ ಮಾರ್ಗವಿಲ್ಲ. ಬೀದಿದೀಪದ ವ್ಯವಸ್ಥೆಯೂ ಇಲ್ಲ. ರಸ್ತೆಯಲ್ಲಿ ಹೋಗುವಾಗ ಯಾವುದೇ ಸುರಕ್ಷತೆ ಇರುವುದಿಲ್ಲ. ವಾಹನ ದಟ್ಟಣೆ ಇರುವುದರಿಂದ ಭಯವಾಗುತ್ತದೆ. ಬಡಾವಣೆ ಸಮೀಪವೇ ಬಸ್ ನಿಲುಗಡೆಗೆ ಬಿ.ಎಂ.ಟಿ.ಸಿ. ಅಧಿಕಾರಿಗಳು ಕ್ರಮ ವಹಿಸಬೇಕು.